Skip to main content

Posts

Showing posts from December, 2019

ಸಿಡಿದು ನಿಂತ ದೇಶದ ಜನಸಾಮಾನ್ಯರು- rebel by common people. CAA-NRC-NPR

ಸಿಡಿದು ನಿಂತ ದೇಶದ ಜನಸಾಮಾನ್ಯರು! ದಂಗುಬಡಿದ ಮೋದಿಯ ಕೇಂದ್ರ ಸರಕಾರ! ದೇಶದ ಜನಸಾಮಾನ್ಯರು ಇಂದು ಭಾರಿ ದೊಡ್ಡ ಪ್ರಮಾಣದಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ದೇಶದ ಪ್ರಮುಖ ನಗರಗಳು, ವಿಶ್ವವಿದ್ಯಾಲಯಗಳು, ಐಐಟಿ, ಐಐಎಮ್   ನಂತಹ ಶಿಕ್ಷಣ ಸಂಸ್ಥೆಗಳು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳು ಕಳೆದ ಹತ್ತಾರು ದಿನಗಳಿಂದ ಬಿರುಸಿನ ಜನಪ್ರತಿರೋಧದ ಕೇಂದ್ರಗಳಾಗಿ ಮಾರ್ಪಟ್ಟಿದೆ. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ದೇಶಾದ್ಯಂತ ಮೋದಿ ಸರಕಾರದ ಜನವಿರೋಧಿ ಹಾಗೂ   ದೇಶವಿರೋಧಿ ನೀತಿಗಳ ವಿರುಧ್ಧ ಭಾರಿ ಹೋರಾಟಗಳಿಗೆ ಇಳಿದಿದ್ದಾರೆ. ಮೋದಿ ಸರಕಾರ ಜನರ ಮೇಲೆ   ಮಾಡುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ದಮನ ದೌರ್ಜನ್ಯಗಳ ವಿರುಧ್ಧ ಸಿಡಿದೆದ್ದು ನಿಂತಿದ್ದಾರೆ. ಪ್ರತಿಬಂದಕಾಜ್ಞೆ, ಕರ್ಫ್ಯೂ, ಬಂಧನ, ಸುಳ್ಳುಕೇಸು, ಲಾಠಿ ಚಾರ್ಜ್, ಗೋಲಿಬಾರ್ ಗಳಿಗೆ ಅಂಜದೆ ಅಳುಕದೇ ದೈರ್ಯದಿಂದ ಎದೆಯೊಡ್ಡಿ ಲಕ್ಷಾಂತರ   ಸಂಖ್ಯೆಯಲ್ಲಿ ಹೋರಾಟದಲ್ಲಿ ದುಮುಕುತ್ತಿದ್ದಾರೆ. ದೇಶವನ್ನು ಅಧೋಗತಿಗೆ ದೂಡಿರುವ ಆಳುವ ಶಕ್ತಿಗಳು ಮತ್ತವರ ಸರ್ಕಾರವನ್ನು ಪ್ರಶ್ನಿಸಲು ತೊಡಗಿದ್ದಾರೆ. ಜನರನ್ನು ಬಹಳ ಕಾಲ ಭ್ರಮೆಯಲ್ಲಿಟ್ಟು, ಆಮಿಷಗಳಿಗೆ ದೂಡಿ ಹಿಡಿದಿಟ್ಟು, ಬೇಕಾಬಿಟ್ಟಿಯಾಗಿ ಜನಸಾಮಾನ್ಯರ ಹಕ್ಕುಗಳನ್ನು ಕಸಿದು, ಸಂಪನ್ಮೂಲಗಳನ್ನು ದೋಚುವ ಕಾರ್ಯವನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಈ ಜನಪ್ರತಿರೋಧ ನಿರೂಪಿಸಿದೆ....

ಪೌರತ್ವ ಕಾಯಿದೆಯ ಹೆಸರಿನಲ್ಲಿ ಅಲ್ಪಸಂಖ್ಯಾತ , ದಲಿತ, ದಮನಿತ, ಬಹುಸಂಖ್ಯಾತ - CAA-NRC- minorities- daliths-

ಪೌರತ್ವ ಕಾಯಿದೆಯ ಹೆಸರಿನಲ್ಲಿ ಅಲ್ಪಸಂಖ್ಯಾತ , ದಲಿತ, ದಮನಿತ, ಬಹುಸಂಖ್ಯಾತ ಜನಸಾಮಾನ್ಯರ  ಪೌರತ್ವ ನಿರಾಕರಣೆಯ ಸಂಚು!? ಇಂಡಿಯಾ ಇಂದು ಭಾರಿ ಪ್ರಕ್ಷುಭ್ಧತೆಯಲ್ಲಿದೆ. ಇಡೀ ದೇಶದ ಬಹುಸಂಖ್ಯಾತ ಜನಸಾಮಾನ್ಯರು   ಕೇಂದ್ರ ಸರಕಾರದ ನಿರಂಕುಶ ಆಡಳಿತದ ವಿರುದ್ಧ ಸಿಡಿದೆದ್ದಿದ್ದಾರೆ. ಪ್ರತಿಬಂಧಕಾಜ್ಞೆ, ಕರ್ಫ್ಯೂ ಗಳನ್ನು ಲೆಕ್ಕಿಸದೇ, ಪ್ರಭುತ್ವದ ಸಶಸ್ರ್ತ ಪಡೆಗಳ   ಲಾಠಿ ಚಾರ್ಜ್ ಗುಂಡೇಟಿಗೆ ಎದೆಯೊಡ್ಡಿ ಬೀದಿಗಿಳಿದು ಹೋರಾಟಗಳಿಗೆ ದುಮುಕುತ್ತಿದ್ದಾರೆ. ವಿದ್ಯಾರ್ಥಿ ಸಮೂಹ ಅದರಲ್ಲಿ ಮುಂಚೂಣಿಯಲ್ಲಿದೆ. 1947ರಲ್ಲಿ ಬ್ರಿಟೀಷರು ಇಂಡಿಯಾದಲ್ಲಿದ್ದ ಭಾರಿ ಭೂಮಾಲಿಕರು ಹಾಗೂ ರಾಜರುಗಳು, ಪಾಳೇಗಾರರು ಮತ್ತು ಪ್ರಧಾನವಾಗಿ ಬ್ರಿಟೀಷರ ದಲ್ಲಾಳಿ ಬಂಡವಾಳಿಗರನ್ನೊಳಗೊಂಡ ಭಾರಿ ಆಸ್ತಿವಂತರಾಗಿದ್ದ ವರ್ಗಗಳಿಗೆ ರಾಜಕೀಯ ಅಧಿಕಾರ ಹಸ್ತಾಂತರ   ಮಾಡಿ ಭೌತಿಕವಾಗಿ ಇಂಡಿಯಾ ತೊರೆದು ಹೋದರು. ಅದಾಗಿ ಏಳು ದಶಕಗಳು ಕಳೆದಿವೆ.   ಈ ಏಳು ದಶಕಗಳಲ್ಲಿ ಇಂಡಿಯಾ ದೇಶವು ಜಾಗತಿಕ ಭಾರಿ ಕಾರ್ಪೋರೇಟುಗಳ ಹಿಡಿತಗಳಲ್ಲಿ ಸಿಲುಕಿತ್ತು. ಅದು ಈ ದೇಶದ ಜನಸಾಮಾನ್ಯರನ್ನು ಭಾರಿ ಅಭದ್ರತೆಯತ್ತ ದೂಡಿದೆ. ಅದರ ಪರಿಣಾಮವಾಗಿ ಇಂದು ಈ ದೇಶದಲ್ಲೇ ಹುಟ್ಟಿ ಬೆಳೆದ ಜನಸಾಮಾನ್ಯರು ದೇಶಭ್ರಷ್ಟರಾಗಿ ಕ್ಯಾಂಪುಗಳಲ್ಲಿ ಬಂದಿಗಳಾಗಿ ಇರಬೇಕಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಇಂಡಿಯಾದ ಭಾಗವೆಂದು ಆಳುವ ಸರ್ಕಾರಗಳು ಹೇಳುತ್ತಾ ...

ಇಂದಿನ ಪ್ರಭುತ್ವ-state- unnao, rape-murder

ಇಂದಿನ ಪ್ರಭುತ್ವ ಇಂದಿನ ಪ್ರಭುತ್ವ ಮತ್ತದರ ಅಂಗಗಳು ಕಾರ್ಯಾಚರಿಸುತ್ತಿರುವ ನೀಚ ಪರಿಯಿದು ಉನ್ನಾವೋ ಘಟನೆ. ಅಂತಹ ಗಟ್ಟಿತನದ ಹೆಣ್ಣುಮಗಳಿಗೆ ಕನಿಷ್ಠ ರಕ್ಷಣೆ ಕೂಡ ನೀಡಲು, ನ್ಯಾಯ ಒದಗಿಸಲು ಸಾಮರ್ಥ್ಯವನ್ನೇ ಕಳೆದುಕೊಂಡು ಕಾರ್ಪೊರೆಟ್ ಹಾಗೂ ಊಳಿಗಮಾನ್ಯ ಶಕ್ತಿಗಳ ರಕ್ಷಣೆಯಲ್ಲಿ ಪೂರ್ಣ ನಿರತವಾಗಿದೆ. ಇವೆಲ್ಲಾ ಫ್ಯಾಸಿಸ್ಟ್ ವ್ಯವಸ್ಥೆಯೊಂದರ ಅವಿಬಾಜ್ಯ ಭಾಗಗಳಾಗಿವೆ. ಇಲ್ಲಿ ಗುಂಡಿಟ್ಟು ಕೊಂದರು ಅಲ್ಲಿ ಸುಡಿಸಿ ಕೊಂದರು ಕಾರಣವೊಂದೇ ಆದರೆ ಅಲ್ಲಿ ಸಂತ್ರಸ್ಥೆಯೇ ಬಲಿ ಇಲ್ಲಿ ಆರೋಪಿಗಳೇ ಬಲಿ ಅಲ್ಲೂ ನ್ಯಾಯ ಸಿಗಲಿಲ್ಲ ಇಲ್ಲಿ ನ್ಯಾಯ ಗೆಲ್ಲಲಿಲ್ಲ ಕಾನೂನು ಇರಲೇ ಇಲ್ಲ  ಎರಡೂ ಕಡೆ  ಬೆಂಕಿಯುಗುಳಿತು ಪೋಲಿಸ್ ಬಂದೂಕು ಇಲ್ಲಿ ಬೆಂಕಿ ಹಚ್ಚಿದರು ಅಪರಾಧಿಗಳೇ ಅಲ್ಲಿ ಅಲ್ಲೂ ಸುಟ್ಟು ಕರಕಲಾದವಳು ಇಲ್ಲೂ ಸುಟ್ಟು ಕರಕಲಾದವಳು ಮಾತ್ರ ಹೆಣ್ಣು ಕಲ್ಬುರ್ಗಿ ವಿಜಯಪುರ  ದುರಂತ ಕತೆಗಳು ಮುಂದುವರೆದಿವೆ ದಾನಮ್ಮ ಸೌಜನ್ಯ, ಆಸಿಫಾ,ಸುಮಗಳ ನೆನಪುಗಳು ಕಾಡುತಿವೆ ದೇಶವೇ ಮೂಕ ಸಾಕ್ಷಿಯಾಗಿ ನಿಂತಿದೆ ಅಪರಾಧವೇ ಅಧಿಕಾರವಾಗಿ ಕುಂತಿದೆ ಸುಮ್ಮನೇ ಕುಂತರೆ ನಿಟ್ಟುಸಿರಿಗೂ ಇರುವುದಿಲ್ಲ ಅವಕಾಶ.... ೦೮/೧೨/೨೦೧೯. - ನಂದಕುಮಾರ್ ಕೆ ಎನ್.

ಮಹಿಳೆಯರ ಮೇಲಿನ ಅತ್ಯಾಚಾರಗಳೂ! ಸರಕಾರಿ ಆಡಳಿತ ಯಂತ್ರವೂ !-rapes, murders, govt organs, communal agenda

ಮಹಿಳೆಯರ ಮೇಲಿನ ಅತ್ಯಾಚಾರಗಳೂ!   ಸರಕಾರಿ ಆಡಳಿತ ಯಂತ್ರವೂ ! ಸಂಘ ಪರಿವಾರದ ಕೋಮುವಾದೀ ಫ್ಯಾಸಿಸ್ಟ್ ಕಾರ್ಯ ಸೂಚಿಯೂ! ನಮ್ಮ ಪಕ್ಕದ ರಾಜ್ಯ ತೆಲಂಗಾಣದಲ್ಲಿ ದಿಶಾ ಎಂಬ ಎನ್ನುವ ಹೆಣ್ಣುಮಗಳೊಬ್ಬಳನ್ನು ವಿಕ್ಷಿಪ್ತ ಹಾಗೂ ವಿಕೃತ ಮನಸ್ಸಿನ ಯುವಕರು ಧಾರುಣವಾಗಿ ಅತ್ಯಾಚಾರ ಮಾಡಿ ಪೆಟ್ರೋಲ್ ಹಾಕಿ ಸುಟ್ಟು ಕರಕಲಾಗಿಸಿದ್ದು ಇಡೀ ದೇಶದ ಹೃದಯವನ್ನೇ ಕಲಕಿದ ಘಟನೆ. ಅದೇ ಸಂಧರ್ಭದಲ್ಲೇ ನಮ್ಮ ರಾಜ್ಯದ ಕಲ್ಬುರ್ಗಿಯಲ್ಲಿ ಎಂಟು ವರ್ಷದ ಎಂಟು ವರ್ಷದ ಎಳೇ ಬಾಲೆಯೊಬ್ಬಳನ್ನು ಅತ್ಯಾಚಾರ ಮಾಡಿ ಕಗ್ಗೊಲೆ ಮಾಡಿದ ಘಟನೆಯೂ ನಡೆಯಿತು. ಅದು ಹೆಚ್ಚು ಸುದ್ಧಿಯಾಗಲಿಲ್ಲ. ಇದೇ ಸಮಯದಲ್ಲೇ ದಾನಮ್ಮ ಎಂಬ ಎಳೇ ಬಾಲೆಯ ಅತ್ಯಾಚಾರ ಕೊಲೆ ಘಟನೆಯಲ್ಲಿ ಸುದ್ಧಿಗೆ ಗ್ರಾಸವಾಗಿದ್ದ ವಿಜಯಪುರ ಜಿಲ್ಲೆಯ ಜಮಖಂಡಿಯಲ್ಲಿ ಪ್ರಿಯಾಂಕ ಎಂಬ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ ಕೊಲೆ ನಡೆದಿದ್ದು ಹೆಚ್ಚಾಗಿ ಸುದ್ಧಿ ಮಾದ್ಯಮಗಳ ಕಣ್ಣಿಗೆ ಬೀಳಲಿಲ್ಲ. ದಿಶಾಳನ್ನು ಸುಟ್ಟು ಹಾಕಿದ ಸ್ಥಳದ ಪಕ್ಕದಲ್ಲೇ ಮತ್ತೊಂದು ಹೆಣ್ಣು ದೇಹ ಕರಕಲಾಗಿ ಸಿಕ್ಕಿದ್ದ ವರದಿಯೂ ಬಂದಿತ್ತು. ಅದೂ ಕೂಡ ಹೆಚ್ಚಿನ ಸುದ್ಧಿಗೆ ಗ್ರಾಸವಾಗಲಿಲ್ಲ. ಅಂದರೆ ಹೈದರಾಬಾದ್ ಘಟನೆಯ ಸಂದರ್ಭದಲ್ಲೇ ಕರ್ನಾಟಕವೂ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆಗಳು ನಡೆದಿವೆ. ಕೆಲವು ಮಾತ್ರ ಒಂದು ಮಟ್ಟದ ಸುದ್ದಿಯಾದವು ಅಷ್ಟೇ. ಅದರಲ್ಲಿ ಒಂದೆರಡು ಘಟನೆಗಳಿಗೆ ಮಾತ್ರ ಸಾರ್ವಜ...

ಆರ್ಥಿಕ ಸಾಮಾಜಿಕ ಬಿಕ್ಕಟ್ಟುಗಳ ಉಲ್ಭಣತೆ ಅತ್ಯಾಚಾರ, - rape murder, social crisis. insecurity

ಆರ್ಥಿಕ ಸಾಮಾಜಿಕ ಬಿಕ್ಕಟ್ಟುಗಳ ಉಲ್ಭಣತೆ ಅತ್ಯಾಚಾರ, ಅನ್ಯಾಯ, ಮೋಸ, ಕಗ್ಗೊಲೆ, ಅಭದ್ರತೆಗಳ ದೇಶ ಹಾಗೂ ಸಮಾಜ ಉಳಿದು ಬೆಳೆಯಲು ಸಾಧ್ಯವೇ?  ಸಮಾಜದ ಭವಿಷ್ಯವೇನು? ಬದುಕಿನ ಹತ್ತು ಹಲವು ಸುಂದರ ಕನಸುಗಳನ್ನು ಇಟ್ಟುಕೊಂಡು, ವೃತ್ತಿಯಲ್ಲಿ ಬೆಳೆಯುತ್ತಿದ್ದ ಮತ್ತೊಂದು ಯುವ  ವಿದ್ಯಾವಂತ ಹೆಣ್ಣು ಮಗಳು ತೆಲಂಗಾಣ ರಾಜ್ಯದಲ್ಲಿ ವಿಕೃತ ಕಾಮುಕರಿಂದ ಅತ್ಯಾಚಾರಕ್ಕೀಡಾಗಿ ಸುಟ್ಟು ಕರಕಲಾಗಿ ಹತ್ಯೆಗೀಡಾಗಿದ್ದಾಳೆ.  ಆಕೆ ವೃತ್ತಿಯಲ್ಲಿ ಪಶುವೈದ್ಯೆ. ಸ್ಕೂಟರ್ ಪಂಕ್ಚರ್ ಗೆ ಸಹಾಯ ಮಾಡುವ ನೆಪದಲ್ಲಿ ಪುಂಡರು ಆಕೆಯನ್ನು ಎಳೆದುಕೊಂಡು ಹೋಗಿ ವಿಕ್ಷಿಪ್ತ, ವಿಕೃತ ಹಾಗೂ ಕ್ರೂರ ಗುಂಪು ಅತ್ಯಾಚಾರ ಮಾಡಿದ್ದಲ್ಲದೇ ನಂತರ ಆಕೆಯನ್ನು ಪೆಟ್ರೋಲಿನಲ್ಲಿ ಸುಟ್ಟು ಹಾಕಿರುವ ಘಟನೆಯನ್ನು ಹೇಗೆಂದು ಹೇಳುವುದೋ ಗೊತ್ತಾಗದಂತಹ ಸ್ಥಿತಿಯಾಗಿದೆ. ಉತ್ತರಪ್ರದೇಶದಲ್ಲಿ ಉನ್ನಾವೋದ ಅತ್ಯಾಚಾರ ಸಂತ್ರಸ್ಥೆಯನ್ನು ಹಾಡಹಗಲೇ ಬೆಂಕಿ ಹಚ್ಚಿ ಕಗ್ಗೊಲೆ ಮಾಡಲಾಗಿದೆ. ಇದೇ ಸಂಧರ್ಭದಲ್ಲಿ ನಮ್ಮದೇ ರಾಜ್ಯದ ಕಲ್ಬುರ್ಗಿಯಲ್ಲಿ ಎಂಟು ವರ್ಷದ ಎಳೆಬಾಲೆಯೊಬ್ಬಳ ಮೇಲೆ ಅತ್ಯಾಚಾರ ಮಾಡಿ ಕಗ್ಗೊಲೆ ಮಾಡಿದ್ದು ವರದಿಯಾಗಿದೆ. ನಮ್ಮ ದೇಶದಲ್ಲಿ ಎರಡು ಮೂರು ವರ್ಷದ ಎಳೆ ಕೂಸಿನಿಂದ ಹಿಡಿದು ಎಪ್ಪತ್ತು ಎಂಬತ್ತು ವರ್ಷದ ಅಜ್ಜಿಯರ ಮೇಲೂ ಪ್ರತಿ ನಿತ್ಯ ಅತ್ಯಾಚಾರಗಳು ನಡೆಯುತ್ತಿವೆ ಎನ್ನುವುದು ಹಲವರಿಗೆ ಆಶ್ಚರ್ಯವಾದರೂ ವಾಸ್ತವವಾಗಿದೆ. ಅದರಲ್ಲೂ ಕೇವಲ ದಲಿತ ದಮನಿತರು...