Skip to main content

Posts

Showing posts from August, 2021

ಮೈಸೂರು ಅತ್ಯಾಚಾರ#mysuru rape 2021#oppression of women in india

  ಮೈಸೂರು ಅತ್ಯಾಚಾರ ಘಟನೆ ಗ್ರಹಿಸಬೇಕಾದುದೇನು…                                          -ನಂದಕುಮಾರ್ ಕೆ. ಎನ್. ಕುಂಬ್ರಿಉಬ್ಬು ರಾಜ್ಯದ ಮೈಸೂರಿನಲ್ಲಿ ವಿದ್ಯಾರ್ಥಿನಿಯೊಬ್ಬರ ಮೇಲೆ ಚಾಮುಂಡಿ ಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿ ಆರೇಳು ಮನುಷ್ಯ ರೂಪದ ದುಷ್ಟ ಜಂತುಗಳಿಂದ ಅತ್ಯಾಚಾರವಾಗಿ ನಾಲ್ಕೈದು ದಿನಗಳಾಗಿವೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಭಾರಿ ಆಘಾತಗಳಿಗೆ ಗುರಿಯಾಗಿರುವ ಆ ಸಂತ್ರಸ್ಥ ಹೆಣ್ಣುಮಗಳು ಆಸ್ಪತ್ರೆಯಲ್ಲಿ ನಾಲ್ಕುದಿನಗಳ ಚಿಕಿತ್ಸೆ ಪಡೆದು ಈಗ ವಿಶ್ರಾಂತಿಯಲ್ಲಿದ್ದರೂ ತನ್ನ ಮೇಲಾದ ಹಿಂಸೆ ಹಾಗೂ ತನಗಾದ ತೀವ್ರ ಆಘಾತಗಳಿಂದ ಇನ್ನೂ ಹೊರಬರಲಾಗಿಲ್ಲ. ಆಕೆಯ ಗೆಳೆಯ ಕೂಡ ತೀವ್ರ ಹಲ್ಲೆಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಈ ಘಟನೆ ರಾಜ್ಯದ ಜನರಲ್ಲಿ ಅದರಲ್ಲೂ ಮಹಿಳೆಯರಲ್ಲಿ ತೀವ್ರ ಆತಂಕ ಆಕ್ರೋಷಗಳನ್ನು ಉಂಟುಮಾಡಿವೆ. ಈ ಘಟನೆ ಸಾಕಷ್ಟು ಚರ್ಚೆಗಳಿಗೆ ಗುರಿಯಾಗುತ್ತಿದೆ. ಹಲವಾರು ಕಡೆಗಳಲ್ಲಿ ಜನರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈಗ ತಮಿಳುನಾಡು ಮೂಲದ ಐವರು ಯುವಕರು ಹಾಗೂ ಒಬ್ಬಅಪ್ರಾಪ್ತ ವಯಸ್ಕನನ್ನು ಆರೋಪಿಗಳೆಂದು ಸೆರಹಿಡಿಯಲಾಗಿದೆ.  ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆಂದ...

ತಾಲಿಬಾನ್ ಅಫ್ಘಾನಿಸ್ತಾನವನ್ನು ವಿಮೋಚಿತಗೊಳಿಸಿದೆಯೇ#Taliban#Afghanistan# liberation#America

  ತಾಲಿಬಾನ್ ಅಫ್ಘಾನಿಸ್ತಾನವನ್ನು ಅಮೇರಿಕದ  ಹಿಡಿತದಿಂದ ವಿಮೋಚಿತಗೊಳಿಸಿದೆಯೇ….?                                                             -ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು.                ಅಫ್ಘಾನಿಸ್ತಾನ ಈಗ ಇಂಡಿಯಾದ ಮಾಧ್ಯಮ ಲೋಕದಲ್ಲಿ ಭಾರಿ ಸುದ್ದಿಯಲ್ಲಿದೆ. ಅಂತರಾಷ್ಟ್ರೀಯವಾಗಿಯೂ ಸಾಕಷ್ಟು ಸುದ್ದಿಯನ್ನು ಮಾಡುತ್ತಿದೆ. ರಾಜ್ಯದ ಹಲವು ಕನ್ನಡ ಟಿವಿ ಮಾಧ್ಯಮಗಳಂತೂ ನಮ್ಮ ರಾಜ್ಯ ಹಾಗೂ ದೇಶದಲ್ಲಿ ಬೇರೇನೂ ಸಮಸ್ಯೆಗಳಾಗಲೀ ಸುದ್ಧಿಗಳಾಗಲೀ ಇಲ್ಲದೇ ಬರಗೆಟ್ಟವರಂತೆ ಅಪ್ಘಾನಿಸ್ತಾನ… ಅಲ್ಲಿನ ತಾಲಿಬಾನ್… ಅಲ್ಲಿನ ಮಹಿಳಾ ಹಕ್ಕುಗಳು… ಅಲ್ಲಿನ ಪ್ರಜಾ ಪ್ರಭುತ್ವ.. ಎಂದೆಲ್ಲಾ ಸುಳ್ಳುಗಳು ಹಾಗೂ ಅತಿ ರಂಜಿತತೆ ಬೆರೆಸಿ ಅರಚಾಡುತ್ತಾ ಆ ಮೂಲಕ ತಮಗೆ ನಿರ್ದೇಶನವಾಗಿರುವ ಕೋಮುವಾದಿ ಕಾರ್ಯಸೂಚಿಯನ್ನು ಭರದಿಂದ ಜಾರಿಯಲ್ಲಿಟ್ಟಿವೆ.                                     ...