Skip to main content

Posts

Showing posts from September, 2021

ಚಾರಿತ್ರಿಕ ರೈತಾಪಿ ಚಳವಳಿಗೆ ಹತ್ತು ತಿಂಗಳು/ peasant movement of India/lessons

  ಚಾರಿತ್ರಿಕ ರೈತಾಪಿ ಚಳವಳಿಗೆ ಹತ್ತು ತಿಂಗಳು ಚಾರಿತ್ರಿಕ ರೈತ ಚಳವಳಿ ದೇಶಕ್ಕೆ ಹೇಳುತ್ತಿರುವ ಪಾಠಗಳು                                                 - ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು ಮಿಂಚಂಚೆ:-nandakumarnandana67@gmail.com   ದೇಶವಷ್ಟೇ ಅಲ್ಲದೇ ಜಾಗತಿಕವಾಗಿಯೇ ಭಾರಿ ಸಂಚಲನವನ್ನು ಸೃಷ್ಟಿಸುತ್ತಿರುವ ಪಂಜಾಬ್, ದೆಹಲಿ, ಉತ್ತರ ಪ್ರದೇಶ, ಹರ್ಯಾಣ, ಮದ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಹರಡಿ ಹಾಗೇನೆ ದೇಶಾದ್ಯಂತ ನಡೆಯುತ್ತಿರುವ ರೈತ ಚಳವಳಿಗೆ ಈಗ ಹತ್ತು ತಿಂಗಳು. ಇದು ಸಾಮಾನ್ಯವಾದ ವಿಚಾರವಲ್ಲ. ಆಳುವ ಸರ್ಕಾರದ ಅಂಗಗಳ ಎಡೆಬಿಡದ ಕಿರುಕುಳಗಳು, ಅಡ್ಡಿಗಳು, ಒಡೆದು ಹಾಕುವ ದುಷ್ಟತನಗಳು ಮತ್ತು ದಮನಗಳ ನಡುವೆ ಇಷ್ಟೊಂದು ಸುದೀರ್ಘವಾಗಿ ಮತ್ತು ನಿರಂತರವಾಗಿ ಜನಚಳವಳಿಯೊಂದು ನಡೆಯುತ್ತಾ ಬಂದಿರೋದು ಮಹತ್ವಪೂರ್ಣ ಚಾರಿತ್ರಿಕ ವಿಚಾರವಾಗಿದೆ. ಈ ಚಳವಳಿಯ ನಾಯಕತ್ವ ದೇಶಾದ್ಯಂತ ಸಂಚರಿಸುತ್ತಾ ರೈತಾಪಿಗಳು ಮತ್ತಿತರ ಜನಸಮೂಹಗಳನ್ನು ಸಂಘಟಿಸುತ್ತಾ ಸಾಗುತ್ತಿದೆ. ಕರ್ನಾಟಕಕ್ಕೂ ಬಂದು ರಾಜ್ಯದ ಹಲವಾರು ಕಡೆಗಳಲ್ಲಿ ದೆಹಲಿ...

'ಲವ್ ಮತ್ತು ನಾರ್ಕೋಟಿಕ್ಸ್ ಜಿಹಾದ್’ ನ ಹಿಂದೆ ಮುಂದೆ #ಕೇರಳ ಕ್ರಿಶ್ಚಿಯನ್# 'love and narcotics jihad'# kerala bishop joseph kallarangatt

  ಕೇರಳ ಕ್ರಿಶ್ಚಿಯನ್ ಧಾರ್ಮಿಕ ಮುಖಂಡತ್ವ ಪ್ರತಿಪಾದನೆಯ ‘ಲವ್ ಮತ್ತು ನಾರ್ಕೋಟಿಕ್ಸ್ ಜೆಹಾದ್’ ನ ಹಿಂದೆ ಮುಂದೆ…                                                             - ನಂದಕುಮಾರ್. ಕೆ. ಎನ್ ಕುಂಬ್ರಿ ಉಬ್ಬು   ಮಿಂಚಂಚೆ: nandakumarnandana67@gmail.com ಇಂಡಿಯಾದಲ್ಲಿ ‘ಲವ್  ಜಿ ಹಾದ್’ ಪದದ ಆವಿಷ್ಕಾರ ಮಾಡಿದ್ದು ಸಂಘಪರಿವಾರ. ನಂತರ ನ್ಯಾಯಾಲಯದಲ್ಲಿ ಅಂತಹ ಪದವಾಗಲೀ, ಅಂತಹ ಪರಿಕಲ್ಪನೆಯಾಗಲೀ ತಮ್ಮ ಸರ್ಕಾರಕ್ಕೆ ಇಲ್ಲವೆಂದು ಪ್ರಮಾಣಪತ್ರ ಸಲ್ಲಿಸಿದ್ದು ಕೂಡ ಸಂಘ ಪರಿವಾರದ ಬಿಜೆಪಿ ಪಕ್ಷದ ಸರಕಾರವೇ ಆಗಿದೆ. ಲವ್  ಜಿ ಹಾದ್ ಹೆಸರಿನಲ್ಲಿ ಕೋಮುದ್ರುವೀಕರಣ ಮಾಡಿ ಗರಿಷ್ಟ ರಾಜಕೀಯ ಲಾಭ ಪಡೆಯುವ ಎಲ್ಲಾ ಹುನ್ನಾರಗಳನ್ನು ಸಂಘಪರಿವಾರ ಮತ್ತದರ ನಾಯಕರುಗಳು ಮಾಡುತ್ತಾ ಬರುತ್ತಿರುವುದು ಸಾಕಷ್ಟು ಜನರಿಗೆ ಗೊತ್ತಿರುವ ವಿಚಾರವೇ ಆಗಿದೆ. ಇದರ ಮಧ್ಯೆಯೇ ಲವ್  ಜಿ ಹಾದ್ ಎಂದು ಆರೋಪಿಸಿದ ಕೇರಳದ ಹನ್ನೊಂದು ಪ್...

ಜಾಗತಿಕ ಬಂಡವಾಳವಾದದ ವಿನಾಶಕಾರಿ ಕ್ರಿಯೆಗಳೂ#global capital#crisis#job losses# economic derpression

    ಜಾಗತಿಕ ಬಂಡವಾಳವಾದದ ವಿನಾಶಕಾರಿ ಕ್ರಿಯೆಗಳೂ… ಹೆಚ್ಚುತ್ತಿರುವ ಜನಸಾಮಾನ್ಯರ ಬದುಕಿನ ಭವಣೆಗಳೂ…      -ನಂದಕುಮಾರ್ ಕೆ. ಎನ್. ಕುಂಬ್ರಿಉಬ್ಬು                                                             ಮಿಂಚಂಚೆ:nandakumarnandan67@gmail.com ಇಪ್ಪತೈದು ವರುಷಗಳ ಹಿಂದೆ ಇಂಡಿಯಾದಲ್ಲಿ ತನ್ನ ಉತ್ಪಾದನೆ ಹಾಗೂ ಜೋಡಣೆಯನ್ನು ಶುರುಮಾಡಿದ್ದ ಅಮೇರಿಕಾ ಮೂಲದ ಫೋರ್ಡ್ ಮೋಟಾರ್ ಕಂಪನಿ ಈಗ ಇಲ್ಲಿನ ತನ್ನ ಘಟಕಗಳನ್ನು ಮುಚ್ಚುತ್ತಿದೆ. ಅದರಿಂದಾಗಿ ಸುಮಾರು 4000 ಉದ್ಯೋಗಗಳು ನಷ್ಟವಾಗುತ್ತವೆ ಎಂದು ಹೇಳಲಾಗುತ್ತಿದೆ. ಇಂಡಿಯಾದಲ್ಲಿ ಎರಡುವರೆ ಶತಕೋಟಿ ಡಾಲರುಗಳನ್ನು ಹೂಡಿದ್ದ ಈ ಸಂಸ್ಥೆಗೆ ಕಳೆದ ಹತ್ತು ವರುಷಗಳಿಂದ ಇದುವರೆಗೆ   ಒಟ್ಟು ಎರಡು ಶತಕೋಟಿ ಡಾಲರುಗಳಷ್ಟು ನಷ್ಟವಾಗಿದೆ ಎನ್ನಲಾಗುತ್ತಿದೆ. ಹೀಗೆ ಏರಿಕೆಯತ್ತ ಸಾಗುತ್ತಿರುವ ನಷ್ಟ ಹಾಗೂ ಬೆಳವಣಿಗೆಯ ಭರವಸೆಯಿಲ್ಲದೇ ಅಮೇರಿಕದ ಜನರಲ್ ಮೋಟಾರ್ ಕಂಪನ...

ಮದ್ಯಮ ವರ್ಗ ಪತನದತ್ತ#declining middle class#india

  ಪತನದತ್ತ ತಳ್ಳಲ್ಪಡುತ್ತಿದ್ದರೂ ತಿರುಗಿ ನಿಲ್ಲದ ಮದ್ಯಮ ವರ್ಗ..                                                        -ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು                                                                                ಮಿಂಚಂಚೆ:  nandakumarnandana67@gmail.com   ಇದೇ 2021ರ ಆಗಸ್ಟ್ ನ ಒಂದು ತಿಂಗಳ ಅವಧಿಯಲ್ಲೇ ಸುಮಾರು ಹದಿನೈದು ಲಕ್ಷ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸೆಂಟರ್ ಫಾರ್ ಮಾನಿಟರಿಂಗ್ ಎಕಾನಮಿ (CMIE) ಹೊರಬಿಟ್ಟಿದೆ. ನಗರ ನಿರುದ್ಯೋಗಮಟ್ಟ ಶೇ 9.78 ಗ್ರಾಮೀಣ  ನಿರುದ್ಯೋಗಮಟ್ಟ  ಶೇ 7.64 ಕ್ಕೆ ಏರಿದೆ ಎಂದು ಆ ವರದಿ ಹೇಳಿದೆ.  ಕೊರೋನಾ ಲಾಕ್ ಡೌನ್ ನ ನಂತರ ಇಂಡಿಯಾದಲ್ಲಿ ಔಪಚಾರಿಕ ಹಾಗೂ ...