Skip to main content

Posts

Showing posts from June, 2019

venezuela -America- sponsored-ನಿಲ್ಲದ ಅಮೇರಿಕ ಪ್ರಾಯೋಜಿತ-ವೆನೆಜುಯೇಲಾ

ನಿಲ್ಲದ   ಅಮೇರಿಕ ಪ್ರಾಯೋಜಿತ ವೆನೆಜುಯೇಲಾ  ಬವಣೆ ಸೋಲದ ವೆನೆಜುಯೇಲಾ ಜನತೆ. ದೊಡ್ಡ ತೈಲ ಸಂಪತ್ತಿನ ರಾಷ್ಟ್ರ ವೆನೆಜುಯೇಲಾ ಕಳೆದ ಕೆಲವು ತಿಂಗಳುಗಳಿಂದ ಕ್ಷೋಭೆಯಲ್ಲಿದೆ. ಕ್ಷೋಭೆಗೆ ಮುಖ್ಯ ಕಾರಣ ವೆನೆಜುಯೇಲಾವಲ್ಲ. ಬದಲಿಗೆ ವಿಶ್ವದ ಲೂಟಿಕೋರ ರಾಷ್ಟ್ರ ಅಮೇರಿಕ ಮತ್ತದರ ಕೂಟ. ಜನರಿಂದ ಚುನಾಯಿತವಾದ ಮದುರೋ ಸರಕಾರವನ್ನು ಉರುಳಿಸಲು ಇನ್ನಿಲ್ಲದ ಬುಡಮೇಲು ಕೃತ್ಯಗಳನ್ನು ಹಾಗೂ ಕಸರತ್ತುಗಳನ್ನು ಅದು ನಡೆಸುತ್ತಲೇ ಇದೆ. ಅಮೇರಿಕದ ಹಿಂದಿನ ಅಧ್ಯಕ್ಷ ಜಾರ್ಜ್ ಬುಷ್ ನಂತರ ಬರಾಕ್ ಒಬಾಮಾ ಕಾಲದಿಂದಲೂ ವೆನೆಜುಯೇಲಾದ ಮೇಲೆ ಹೇರಿದ್ದ   ಆರ್ಥಿಕ ನಿರ್ಭಂಧಗಳನ್ನು ತೀವ್ರ ರೀತಿಯಲ್ಲಿ ಹೆಚ್ಚು ಮಾಡುತ್ತಲೇ ಮತ್ತೊಂದು ಕಡೆ ಸಹಾಯದ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರುವ ಕುಟಿಲ ನೀತಿಯನ್ನೂ ಅದು ಅನುಸರಿಸುತ್ತಿದೆ. ಜನರಿಂದ ಆಯ್ಕೆಯಾಗದ ವಿರೋಧ ಪಕ್ಷದ ನಾಯಕನೆಂದು ಹೇಳಿಕೊಂಡಿರುವ   30ರ ಹರೆಯದ ಅಮೇರಿಕದ ಕೈಗೊಂಬೆ ಜುವಾನ್ ಗ್ವಾಯಿಡೋನನ್ನು ಇಟ್ಟುಕೊಂಡು ವೆನೆಜುಯೇಲಾದ ತೈಲ ಸಂಪತ್ತಿನ ಮೇಲೆ ಹಿಡಿತ ಸಾಧಿಸಬೇಕೆಂದು ತಿಣುಕಾಡುತ್ತಿದೆ. ಗ್ವಾಯಿಡೋ ತಾನು ಹಿಂದಿನ ವೆನೆಜುಯೇಲಾದ ಅಧ್ಯಕ್ಷ ಹ್ಯೂಗೋ ಚಾವೇಜ್ ರ ಕಾಲದಲ್ಲಿ   ರಾಷ್ಟ್ರೀಕರಣಗೊಂಡ   ಕಂಪನಿಗಳನ್ನು ಮರಳಿ ಖಾಸಗೀಕರಿಸುತ್ತೇನೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ. ಅದು ರಾಷ್ಟ್ರದ ಅಭಿವೃದ್ದಿಗೆ ಅಗತ್ಯವೆಂದು ಜನರಿಗೆ ನಂಬಿಸುವ ಪ್ರಯತ್ನ ಮಾಡ...
ಮೋದಿಯ ಚುನಾವಣಾ ಗೆಲುವು! ಮುನ್ನೆಲೆಗೆ ತಂದ ಕೆಲವು ಮುಖ್ಯ ಪ್ರಶ್ನೆಗಳು!? ಭಾರಿ ಗದ್ದಲದ 2019ರ ಭಾರತದ ಸಾರ್ವತ್ರಿಕ ಚುನಾವಣೆ ಮುಗಿದು ಪಲಿತಾಂಶ ಕೂಡ ಬಂದಾಯಿತು. ಹಲವರು ಆಶ್ಚರ್ಯ ಪಡುವಂತೆ ಮೋದಿಯ ಬಿಜೆಪಿ 303 ಸ್ಥಾನಗಳನ್ನು ಗೆದ್ದು ಭಾರಿ ಬಹುಮತದಿಂದ ಮುಂದಿನ ಐದು ವರ್ಷಗಳ ಕಾಲ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. 2019ರಲ್ಲಿ ಒಟ್ಟು 900 ದಶಲಕ್ಷ ಮತದಾರರಲ್ಲಿ 468 ದಶಲಕ್ಷ ಪುರುಷರು 432 ದಶಲಕ್ಷ ಮಹಿಳೆಯರು 38,325 ಜನ ತೃತೀಯ ಲಿಂಗಿಗಳು ಸೇರಿದ್ದರು. 2014ರ ಸಾರ್ವತ್ರಿಕ ಚುನಾವಣೆಗಿಂತಲೂ 84.3 ದಶಲಕ್ಷ   ಮತದಾರರು ಹೆಚ್ಚಾಗಿದ್ದರು.              ಈ ಬಾರಿ ಶೇ 67ರಷ್ಟು ಮತ ಚಲಾವಣೆಯಾಗಿತ್ತು. ಇದು ಇದುವರೆಗಿನ ಸರಾಸರಿ ಚಲಾವಣೆಯಾದ ಮತಗಳಲ್ಲೇ ಅತೀ ಹೆಚ್ಚು ಎಂದು ಹೇಳಲಾಗುತ್ತಿದೆ.   ಬಿಜೆಪಿ ತನ್ನ ಶೇಕಡಾವಾರು ಮತಗಳಿಕೆಯನ್ನು ಹಾಗೂ ಸಂಖ್ಯೆಗಳನ್ನೂ ಕೂಡ ಹೆಚ್ಚಿಸಿಕೊಂಡಿದೆ. ಚುನಾವಣಾ   ಆಯೋಗದ ಅಂಕಿ ಅಂಶಗಳ ಪ್ರಕಾರ ದೇಶದ 200 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ 50ರಷ್ಟು ಮತಗಳನ್ನು ತನ್ನದಾಗಿಸಿ ಕೊಂಡಿದೆ. ಈ ಬಾರಿ ಅದು   2014ರ ಲೋಕಸಭಾ ಚುನಾವಣೆಗಿಂತಲೂ ಶೇ6ರಷ್ಟು ಶೇಕಡಾವಾರು ಮತಗಳಿಕೆಯನ್ನು ಹೆಚ್ಚಿಸಿಕೊಂಡಿದೆ.   ಆದರೆ ನೋಟಾ ಮತಗಳಲ್ಲಿ ಹೆಚ್ಚಳವಾಗಲೀ ಕಡಿಮೆಯಾಗಲೀ ಗಮನಾ...

ಚುನಾವಣೆಗಳು ಹಾಗೂ ಸರಕಾರ ರಚನೆಯ-election n it's background#stories#india#2014

ಚುನಾವಣೆಗಳು ಹಾಗೂ ಸರಕಾರ ರಚನೆಯ ಹಿಂದಣ ಕತೆಯೂ! ಜನಸಾಮಾನ್ಯರ ತೀರದ ವ್ಯಥೆಯೂ! ಅದು 2014 ರ ಸಂದರ್ಭ. ಅದುವರೆಗೂ   ಮೋದಿ ಪ್ರಧಾನಿ ಪಟ್ಟದಲ್ಲಿ ಕುಳಿತುಕೊಳ್ಳಬಹುದೆಂದು ನಿರೀಕ್ಷಿಸಿದವರು ಬಹಳ ಕಡಿಮೆ ಜನ. ಯಾಕೆಂದರೆ ಬಿಜೆಪಿಯ ಹೈ ಕಮಾಂಡಿನಲ್ಲೇ ಮೋದಿ ಬಗ್ಗೆ ಒಪ್ಪಿಗೆಯಿರಲಿಲ್ಲ. ಮೋದಿಗೆ ಬಿಜೆಪಿಯಲ್ಲೂ ಹೇಳಿಕೊಳ್ಳುವಂತಹ ಹಿಡಿತವೇನೂ ಇರಲಿಲ್ಲ. ವಾಜಪೇಯಿ, ಅಡ್ವಾನಿ ಮುರಳಿಮನೋಹರ ಜೋಷಿಯಾದಿಯಾಗಿ ಬಿಜೆಪಿ ನಾಯಕತ್ವ ಕೆಲವು ಸಂಧರ್ಭಗಳಲ್ಲಿ ಮೋದಿಗೆ ಪ್ರತಿಕೂಲವಾದ ಮಾತುಗಳನ್ನೂ ಆಡಿದ್ದರು. ಗುಜರಾತ್ ನರಮೇಧದ ಬಗ್ಗೆ ದೇಶದಾದ್ಯಂತ ಆಕ್ರೋಷ ವ್ಯಕ್ತವಾಗಿತ್ತು. ಆ ನರಮೇಧ ನರೇಂದ್ರ ಮೋದಿಯ ನೇರ ನಿರ್ದೇಶನದಲ್ಲಿ ನಡೆದಿತ್ತು ಎಂದು ಅ ಮೊದಲು ಕುಮಾರ್ ನಂತರ ಸಂಜೀವ್ ಭಟ್ ಸೇರಿದಂತೆ ಕೆಲವು ಐಪಿಎಸ್ ಅಧಿಕಾರಿಗಳು ಬಹಿರಂಗವಾಗಿಯೇ ಹೇಳಿದ್ದರು. ನ್ಯಾಯಾಲಯಗಳಲ್ಲಿ ಹಲವು ಖಟ್ಲೆಗಳನ್ನು ಹೂಡಲಾಗಿದ್ದವು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಎರಡು ಅವಧಿಗೆ ಆಯ್ಕೆಯಾಗಿದ್ದು ಮೂರನೇ ಅವಧಿಗೂ ಅವರು ಸ್ಪರ್ದಿಸುತ್ತಾರೆಂದು ಇತ್ತು. ಆದರೆ   ಆಗಲೇ ಮೊದಲಿನಿಂದಲೂ ಹೇಳಲಾಗುತ್ತಿದ್ದ ಮೋದಿ ಹವಾ ಗುಜರಾತಿನಲ್ಲೂ ಇದ್ದಿರಲಿಲ್ಲ. ಪಾಟಿದಾರ್ ಸಮೂಹ ಮೋದಿಯ ವಿರುದ್ದ ನಿಲ್ಲಲಾರಂಭಿಸಿದ್ದರು. ಗುಜರಾತಿನ ಜನಸಾಮಾನ್ಯರಲ್ಲಿ ಮೋದಿ ಪಾಲನೆ ಬಗ್ಗೆ ಅಸಮಾಧಾನಗಳು ಬೆಳೆದಿದ್ದವು.         ...
  ಫ್ಯಾಶಿಸ್ಟ್ ವ್ಯವಸ್ಥೆಯ ಹೇರಿಕೆ ತಡೆಯಲು   ಕಾರ್ಮಿಕ ವರ್ಗ ಮುಂದಾಗಬೇಕು. ! ' ವಿಶ್ವ ಕಾರ್ಮಿಕರೆ ಒಂದಾಗಿ ' ಇದು ಜಗತ್ತನ್ನೆ ಬಹುಸಂಖ್ಯಾತ ದುಡಿಯುವ ವರ್ಗದ ಪರವಾಗಿ ಬದಲಾಯಿಸಿ ನಿಜವಾದ ಬಹುಸಂಖ್ಯಾತ ಪ್ರಜೆಗಳ ಪ್ರಭುತ್ವವನ್ನು ನಿರ್ಮಿಸುವ ಶಕ್ತಿಯಿರುವ ವಿಶ್ವ ಕಾರ್ಮಿಕ ವರ್ಗಕ್ಕೆ ಜಾಗತಿಕ ವ್ಯಕ್ತಿತ್ವ ಕಾರ್ಲ್ ಮಾರ್ಕ್ಸ್ ಕೊಟ್ಟ ಕರೆ .            1848ರ ಅಂದಿನ ಆ ಕರೆ ಇಪ್ಪತ್ತೊಂದನೇ ಶತಮಾನದ ಇಂದಿಗೂ ಪ್ರಸ್ತುತ . ಇಂದು ವಿಶ್ವದ ಬಹು ಸಂಖ್ಯಾತ ಜನಸಮೂಹ ನೂರೆಂಟು ಸಂಕಷ್ಟಗಳಿಗೆ ಈಡಾಗಿದ್ದಾರೆ . ಎಲ್ಲಾ ರೀತಿಯ ಅಸಮಾನತೆಗಳಿಗೆ ಈಡು ಮಾಡಲಾಗಿದೆ. ಆರ್ಥಿಕ ಅಸಮಾನತೆ , ಸಾಮಾಜಿಕ ಅಸಮಾನತೆ , ಲಿಂಗ ಅಸಮಾನತೆ, ವರ್ಣಅಸಮಾನತೆ , ಪ್ರಾದೇಶಿಕ ಅಸಮಾನತೆ ಹೀಗೆ ಅಸಮಾನತೆಗಳ ದೊಡ್ಡ ಕೂಪಗಳೊಳಗೆ ಈ ಜನರೆಲ್ಲಾ ಒದ್ದಾಡುವಂತೆ ಮಾಡಲಾಗಿದೆ. ಜಾಗತಿಕವಾಗಿ ಶ್ರಮಜೀವಿಗಳಿಂದ ಉತ್ಪಾದನೆಯಾಗುವ ಸಂಪತ್ತು ಕೆಲವೇ ಜಾಗತಿಕ ಕಾರ್ಪೊರೆಟ್ ಗಳು ಹತ್ತು ಹಲವು ಕುತಂತ್ರ , ತಂತ್ರಗಳಿಂದ ದೋಚುತ್ತಾ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ . ಅದೇ ವೇಳೆ ಹಿಂದೆ ಇದ್ದಕಾರ್ಮಿಕರ ಜಾಗಗಳಲ್ಲಿ ರೋಬೋಟೀಕರಣ ಮಾಡಲಾಗುತ್ತಿದೆ. ಭಾರಿ ಕಾರ್ಪೋರೇಟುಗಳ ಪೈಪೋಟಿಗಳಿಂದಾಗಿ ಸಾವಿರಾರು ಉದ್ದಿಮೆಗಳು ನೆಲಕಚ್ಚಿ ...