Skip to main content

Posts

Showing posts from March, 2022

ಕೇರಳದ ಎಡರಂಗ ಸರ್ಕಾರದ ವೈರುಧ್ಯಗಳೂ#ಸಿಲ್ವರ್ ಲೈನ್ ರೈಲು ಯೋಜನೆ ಹುಟ್ಟುಹಾಕಿದ ಜನಪ್ರತಿಭಟನೆಗಳೂ#kerala left front#silverline semi highspeed train

  ಕೇರಳದ ಎಡರಂಗ ಸರ್ಕಾರದ ವೈರುಧ್ಯಗಳೂ… ಸಿಲ್ವರ್ ಲೈನ್ ರೈಲು ಯೋಜನೆ ಹುಟ್ಟುಹಾಕಿದ  ಜನಪ್ರತಿಭಟನೆಗಳೂ…                                                                       -ನಂದಕುಮಾರ್ ಕೆ .ಎನ್. ಕುಂಬ್ರಿ ಉಬ್ಬು      ಮಿಂಚಂಚೆ:  nandakumarnandana67@gmail.com   ಪಕ್ಕದ ಕೇರಳ ರಾಜ್ಯ ಕೆಲವು ತಿಂಗಳುಗಳಿಂದ ಹಲವಾರು ಸುದ್ಧಿಗಳಿಗೆ ಕಾರಣವಾಗುತ್ತಿದೆ. ಕೊರೋನಾ ಮೊದಲ ಬಾರಿ ಕಾಣಿಸಿಕೊಂಡ ರಾಜ್ಯ ಹಾಗೇನೆ ಅದನ್ನು ಸಮರ್ಥವಾಗಿ ನಿಭಾಯಿಸಿದ ರಾಜ್ಯವೂ ಕೇರಳವೆಂದು ದೇಶ ಅಲ್ಲದೇ ಅಂತರಾಷ್ಟ್ರೀಯವಾಗಿಯೂ ಸುದ್ಧಿ ಮಾಡಿತ್ತು. ಕೇರಳ ಸುಮಾರು ಮೂರುಮುಕ್ಕಾಲು ಕೋಟಿ ಜನಸಂಖ‍್ಯೆಯ ರಾಜ್ಯ. ದೇಶಾದ್ಯಂತ ಕೇರಳಿಯರು ಹರಡಿದ್ದಾರೆ. ಅಮೇರಿಕ, ಯೂರೋಪು, ಏಷಿಯಾ, ಆಫ್ರಿಕಾ ಖಂಡದ ರಾಷ್ಟ್ರಗಳು ಅಲ್ಲದೇ ಗಲ್ಫ್ ರಾಷ್ಟಗಳಲ್ಲೂ ಕೇರಳೀಯರು ಹರಡಿಕೊಂಡಿದ್ದಾರೆ. ಪ್ರತಿ ಮನೆಯಿಂದ ಒಬ್ಬಿಬ್ಬರಾದರೂ ಹೊರರಾಷ್ಟ್ರಗಳಲ್ಲಿ ದುಡಿದು ಕೇರಳಕ್ಕೆ ಹಣ ಕಳಿಸುತ್ತಾರೆ. ಕೊರೋನಾ ಮೂಲಕ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಸಾಕಷ್ಟು ಜನರು ಹೊರದೇ...

ಸಮವಸ್ತ್ರದಿಂದ ಸಮಾನತೆ ಬಾರದು#ಶಿಕ್ಷಣ ನಿರಾಕರಿಸುವುದರಿಂದ ಸಮಾನತೆ ಬೆಳೆಯದು#head scarf# education# Uniform#eqaulity

ಸಮವಸ್ತ್ರದಿಂದ ಸಮಾನತೆ ಬಾರದು… ತಲೆವಸ್ತ್ರದಿಂದ ಸಮವಸ್ತ್ರ ಕುಂದದು… ಶಿಕ್ಷಣ ನಿರಾಕರಿಸುವುದರಿಂದ ಸಮಾನತೆ ಬೆಳೆಯದು…           -ನಂದಕುಮಾರ್. ಕೆ. ಎನ್.ಕುಂಬ್ರಿಉಬ್ಬು.                                                 ಮಿಂಚಂಚೆ:  nandakumarnandana67@gmail.com ಉಡುಪಿಯ ಕಾಲೇಜೊಂದರಲ್ಲಿ ಹೆಣ್ಣುಮಕ್ಕಳು ಹಾಕಿಕೊಳ್ಳುವ ತಲೆವಸ್ತ್ರದ ನೆಪವೊಂದನ್ನು ಹಿಡಿದು ಬ್ರಾಹ್ಮಣಶಾಹಿ ಫ್ಯಾಸಿಸ್ಟ್ ಶಕ್ತಿಯಾದ ಸಂಘ ಪರಿವಾರ ಆರಂಭಿಸಿದ ಚಿತಾವಣೆ ಈಗ ರಾಜ್ಯ ಮತ್ತು ಇಡೀ ದೇಶದಲ್ಲೇ ಒಂದು ಸಮುದಾಯವನ್ನು, ಅದರಲ್ಲೂ ಹೆಣ್ಣುಮಕ್ಕಳನ್ನು ನೇರವಾಗಿ ಗುರಿ ಮಾಡಿದೆ. ಅವರ ಶಿಕ್ಷಣಕ್ಕೇ ಕುತ್ತಾಗಿಸಿದೆ. ಇವುಗಳ ಮೂಲಕ ಅವರ ಶಿಕ್ಷಣದ ಮೂಲಭೂತ ಹಕ್ಕನ್ನೇ ಕಸಿಯಲಾಗುತ್ತಿದೆ. ಅದಕ್ಕೆ ಸಾರ್ವಜನಿಕ ಮಾನ್ಯತೆಯನ್ನು ದಕ್ಕಿಸಿಕೊಳ್ಳುವ ಕುಟಿಲ ಪ್ರಯತ್ನ ಬಿರುಸಾಗಿದೆ.                         ಇದು ಕೇವಲ ಒಂದ...

ಬಿಜೆಪಿಯ ಗೆಲುವುಗಳೂ… ಚುನಾವಣಾ ರಾಜಕೀಯವೂ… ದೇಶದ ಸಂಸದೀಯ ವ್ಯವಸ್ಥೆಯೂ…#bjp#parliamentary system#election politics#India

  ಬಿಜೆಪಿಯ ಗೆಲುವುಗಳೂ…                     ಚುನಾವಣಾ ರಾಜಕೀಯವೂ…                                    ದೇಶದ ಸಂಸದೀಯ ವ್ಯವಸ್ಥೆಯೂ…                                             - ನಂದಕುಮಾರ್  ಕುಂಬ್ರಿಉಬ್ಬು ಹಾಲಿ ಬಿಜೆಪಿಯ ನಾಯಕ ಸುಬ್ರಮಣ್ಯನ್ ಸ್ವಾಮಿಯದು ಎನ್ನಲಾದ ಒಂದು ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಷ್ಯಾದ ವ್ಲಾದಿಮಿರ್ ಪುತಿನ್ ರಂತೆ ಇಂಡಿಯಾದ ಮೋದಿ ಕೆಲವೇ ಕಾರ್ಪೋರೇಟುಗಳ ಪರವಾಗಿ ಆಡಳಿತ ನಡೆಸುವ ಇರಾದೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ದೇಶದ ಸಣ್ಣ, ಮಧ್ಯಮ, ದೊಡ್ಡ ಕೈಗಾರಿಕಾ ಘಟಕಗಳನ್ನು ಮುಚ್ಚಿಸುವ ರೀತಿಯಲ್ಲಿ ನೀತಿಗಳನ್ನು ಹೇರುತ್ತಾ ಹೋಗುತ್ತಿದ್ದಾರೆ….ಈ ಅರ್ಥದಲ್ಲಿ ಅವರ ಹೇಳಿಕೆಯಿದೆ. ಆ ಹೇಳಿಕೆಯ ಹಿನ್ನೆಲೆ ಏನೇ ಇರಲಿ ಆದರೆ ಅದು ನಮ್ಮ ದೇಶದ ವಾಸ್ತವವೇ ಆಗಿದೆ. ನಮ್ಮ ದೇಶದ ಶೇಕಡಾ ಎಪ್ಪತ್ತರಷ್ಟು ಸಂಪತ್ತು ಅಂಬಾನಿ, ಅದಾನಿಯಂತಹ ಕೆಲವೇ ಭಾರಿ ಕಾರ್ಪೋರೇಟುಗಳ ನಿಯಂತ್ರಣದಲ...

ಜಾಗತಿಕ ಸ್ಥಿತ್ಯಂತರಕ್ಕೆ ಕಾರಣವಾಗಬಹುದೆ ರಶ್ಯದ ಯುಕ್ರೈನ್ ಮೇಲಿನ ಆಕ್ರಮಣ… #russia ukraine war# global power order#America#china

  ಜಾಗತಿಕ ಸ್ಥಿತ್ಯಂತರಕ್ಕೆ ಕಾರಣವಾಗಬಹುದೆ ರಶ್ಯದ ಯುಕ್ರೈನ್ ಮೇಲಿನ ಆಕ್ರಮಣ…                                                        -ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು                     ಮಿಂಚಂಚೆ : nandakumarnandana67@gmail.com ಯುಕ್ರೈನ್ ಮೇಲಿನ ರಶ್ಯದ ನೇರ ಸೇನಾ ದಾಳಿಗಳು ಒಂದು ವಾರಕ್ಕೂ ಹೆಚ್ಚು ಕಾಲದಿಂದ ಮುಂದುವರೆದಿವೆ. ಯುಕ್ರೈನಿನ ಪೂರ್ವಭಾಗಗಳನ್ನು ಆಕ್ರಮಿಸಿಕೊಳ್ಳುತ್ತಾ ಯುಕ್ರೈನ್ ರಾಜಧಾನಿ ಕೀವ್ ಅನ್ನು ವಶಪಡಿಸುವ ಹಂತದಲ್ಲಿ ರಶ್ಯ ಮುಂದುವರೆದಿದೆ. ಇದರಿಂದಾಗಿ ನೂರಾರು ಜನರು ಸಾವಿಗೀಡಾಗಿದ್ದಾರೆ. ಯುಕ್ರೈನಿನ ಜನರ ಆಸ್ತಿಪಾಸ್ತಿಗಳು ನಾಶವಾಗುತ್ತಿವೆ. ಚೆರ್ನಾಬಿಲ್ ಸೇರಿದಂತೆ ಯುಕ್ರೈನಿನ ಎರಡು ಅಣು ವಿದ್ಯುತ್ ಸ್ಥಾವರಗಳನ್ನು ರಷ್ಯಾ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ.   ಒಂದು ಮಿಲಿಯನ್ನಿಗಿಂತಲೂ ಹೆಚ್ಚು ಯುಕ್ರೇನಿಯನ್ನರು ನಿರಾಶ್ರಿತರಾಗಿ ಪಕ್ಕದ ಐರೋಪ್ಯ ರಾಷ್ಟ್ರಗಳಿಗೆ ಈಗಾಗಲೇ ವಲಸೆ ಹೋಗಿದ್ದಾರೆ ಎಂಬ ವರದಿಗಳು ಬರುತ್ತಿವೆ. ದಾಳಿಗಳು ಮತ್ತೂ ಮುಂದುವರೆದಲ್ಲಿ ವಲಸೆ ಸಮಸ್...