ಕನ್ನಡವೆಂದರೆ ಭುವನೇಶ್ವರಿಯೂ ಅಲ್ಲ ಚಾಮುಂಡಿಯೂ ಅಲ್ಲ ಕನ್ನಡವೆಂದರೆ ನಾಡಿನ ಬಹುಸಂಖ್ಯಾತ ಜನರ ಬದುಕಿನ ಬಾಶೆ ನಾಡೆಂದರೆ ದೇವರಲ್ಲ ನಾಡೆಂದರೆ ಜನಸಮುದಾಯಗಳ ಸಾಮೂಹಿಕ ಬದುಕಿನ ಬೀಡು ಬದುಕಿನ ಹಾಡುಪಾಡು ಬೆವರಿನ ಭೂಮಿ ತ್ಯಾಗದ ಫಲ ಕರ್ನಾಟಕವೆಂದರೆ ಮೈಸೂರು ಮಾತ್ರವಲ್ಲ ಬ್ರಾಹ್ಮಣಿಕೆಯ ಆಚರಣೆಗಳು ಬಹುಸಂಖ್ಯಾತ ನಾಡುನುಡಿಯ ಭಾಗವಲ್ಲ ಬಾಶೆಯೆಂದು ದೇವರಾಗಬಾರದು. ನಾಡೆಂದೂ ದೇವರಾಗಬಾರದು ನಾಡುನುಡಿಯೆಂದೂ ಪೂಜಾಸ್ಥಾವರವಾಗಬಾರದು ಪೂಜಾಸ್ಥಾವರವಾದರೆ ಅವುಗಳ ಸರ್ವನಾಶವೆಂದರ್ಥ ಬಂಡಾಯವೆಂದರೆ ಪ್ರತಿಗಾಮಿ ಸಂಧಾನವಾಗಬಾರದು ಅದು ಸ್ವಾರ್ಥವೆಂದರ್ಥ ಬಂಡಾಯವೆಂದರೆ ಪುರೋಗಾಮಿ ಸಂಧಾನವಾಗಬಹುದು. ಅದು ಸಾಮೂಹಿಕ ಹಿತವೆಂದರ್ಥ ೨೯/೦೮/೨೦೨೫. - ನಂದಕುಮಾರ್ ಕುಂಬ್ರಿ ಉಬ್ಬು..