Skip to main content

Posts

Showing posts from February, 2021

ನೆನಯಲೇ ಬೇಕಾದ ದಮನ್ ಪಾಟೀಲ# Daman patil#journalist activist# bidar

  ನೆನಯಲೇ ಬೇಕಾದ ದಮನ್ ಪಾಟೀಲರೆಂಬ ಪತ್ರಿಕಾ ಕಾರ್ಯಕರ್ತ ಹಾಗೂ ಸಾಮಾಜಿಕ ಚೇತನ … . ವಿಶ್ವನಾಥ ಬಾಬುರಾವ್ ಪಾಟೀಲ (ದಮನ್ ಪಾಟೀಲ್) ಬೀದರ. ಬೀದರ ಜಿಲ್ಲೆ ಹನ್ನೆರಡನೇ ಶತಮಾನದಲ್ಲಿ ಕಾಯಕ ಜೀವಿಗಳ  ಪ್ರಜಾತಾಂತ್ರಿಕ  ಚಳವಳಿಯ ತವರೂರು. ನಂತರ ಈ ಭಾಗ ಹೈದರಾಬಾದ ನಿಜಾಮನ ಹಿಡಿತಕ್ಕೆ ಹೋಯಿತು. ಹಾಗಾಗಿ ಹೈದರಾಬಾದ ಕರ್ನಾಟಕದ ಭಾಗವೆಂದೇ ಗುರ್ತಿಸಲ್ಪಡುತ್ತಿದೆ. ಈಗ ಸರಕಾರ ಈ ಭಾಗವನ್ನು ಕಲ್ಯಾಣ ಕರ್ನಾಟಕವೆಂದು ಹೆಸರಿಟ್ಟರೂ ಜನಸಾಮಾನ್ಯರಲ್ಲಿ ಅದಿನ್ನೂ ನೆಲೆಯೂರಿಲ್ಲ. ಊಳಿಗಮಾನ್ಯ ಶೋಷಣೆಯ ವಿಪರೀತಗಳನ್ನು ಇಲ್ಲಿ ಈಗಲೂ ನೋಡಬಹುದಾಗಿದೆ. ರಾಜ್ಯದ ಅತ್ಯಂತ ಹಿಂದುಳಿದ ಭಾಗಗಳಲ್ಲಿ ಈ ಜಿಲ್ಲೆಯೂ ಇದೆ. ಇತ್ತೀಚೆಗೆ ನಿಧನರಾದ ರಾಜ್ಯದ ಹಿರಿಯ ಪತ್ರಕರ್ತ ವಿಶ್ವನಾಥ ಪಾಟೀಲ ಹಕ್ಯಾಳರು ಇದೇ ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕಾದ ಔರಾದಿನ ಹಕ್ಯಾಳ ಹಳ್ಳಿಯವರು. ದಮನ್ ಪಾಟೀಲರೆಂದೇ ಇವರನ್ನು ಬಹುತೇಕರು ಕರೆಯುತ್ತಿದ್ದಿದ್ದು. ಮುಂದುವರೆದ ಸಮುದಾಯದಲ್ಲಿ ಜನಿಸಿದ್ದರೂ ಅವರು ತಮ್ಮ ಕಡೆಯ ಉಸಿರಿನವರೆಗೆ ಇದ್ದಿದ್ದು ಮಾತ್ರ ದಲಿತ ದಮನಿತ ಬಡ ಸಮುದಾಯಗಳ ಜೊತೆಗೆ. ಬೀದರಿನ ಸ್ಥಳೀಯ ಭಾಷಾ ಸೊಗಡಿನಲ್ಲಿಯೇ ಮಾತನಾಡುತ್ತಿದ್ದ ದಮನ್ ಪಾಟೀಲರು ಯಾವಾಗಲೂ ಉನ್ನತಮಟ್ಟದ ಚಿಂತನೆಗಳೊಂದಿಗೆ ಕಾರ್ಯಾಚರಿಸುತ್ತಿದ್ದವರು. ಅವರು ಜಿಲ್ಲಾ ಮಟ್ಟದ ಸರಕಾರಿ ಉದ್ಯೋಗಕ್ಕೆ ಇದೇ ಕಾರಣದಿಂದಾಗಿಯೇ ರಾಜೀನಾಮೆ ನೀಡಿ ನೇರವಾಗಿ ಪತ್ರಿಕಾ ರಂಗಕ್ಕೆ ಬಂದವರು. ಬೀದ...

ಆದಿ ದ್ರಾವಿಡದಿಂದ ಕನ್ನಡದವರೆಗೆ#Adidravida#kannada#makiing history vol 1

  ಆದಿ ದ್ರಾವಿಡದಿಂದ ಕನ್ನಡದವರೆಗೆ.   ಆಂಗ್ಲ ಮೂಲ: ಮೇಕಿಂಗ್ ಹಿಸ್ಟರಿ -ಸಂಪುಟ 1 ಕರ್ನಾಟಕಾಸ್ ಪೀಪಲ್ ಆಂಡ್ ದೆಯರ್ ಪಾಸ್ಟ್                              -ಸಾಕಿ ಕನ್ನಡ ರೂಪಾಂತರ- ಡಾ ಆಶೋಕ್ ಕೆ ಆರ್. -ನಂದಕುಮಾರ್ ಕೆ ಎನ್ ಕುಂಬ್ರಿ ಉಬ್ಬು     "ಮಾತು ಮತ್ತು ಭಾಷೆಯ ಕಾಲಾನುಕ್ರಮದಲ್ಲಿ ನಾನು ಒಟ್ಟು ಮೂರು ಹಂತಗಳನ್ನು ಗುರುತಿಸಿದ್ದೇನೆ" ಎನ್ನುತ್ತಾರೆ ವಿ.ಪಿ.ಅಲೆಕ್ಸೀವ್. "ಅ) ಪಿಥೆಕ್ಯಾಂಥ್ರೋಪಸ್ - ಪದಗಳು ವಸ್ತುಗಳ ಅಂಕಿತಗಳಾಗಿದ್ದವು, ಕೆಲವೊಮ್ಮೆ ಮಾತ್ರ ಪದಗಳು ವಾಕ್ಯಗಳಾಗಿ ಮೂಡುತ್ತಿತ್ತು. ಆ) ನಿಯಾಂಡ್ರಥಾಲ್ ಮನುಷ್ಯನ ಭಾಷೆ - ಇದು ಹೊಸ ಕಾಲಕ್ಕೆ ಹತ್ತಿರವಾದ ಮಾತುಕತೆ, ಸಾಮಾನ್ಯ ವ್ಯಾಕರಣವನ್ನೀಗ ಉಪಯೋಗಿಸಲಾಗುತ್ತಿತ್ತು; ಇ) ಆಧುನಿಕ ಮನುಷ್ಯನ ಭಾಷೆ - ಆಧುನಿಕ ಭಾಷಾ ವಿಧಾನದ ಪಾಂಡಿತ್ಯವನ್ನು ಪೂರ್ಣವಾಗಿ ಪಡೆಯಲಾಯಿತು, ಭಾಷೆಯ ವಿವಿಧ ರೂಪಾತ್ಮಕ ವಿಂಗಡನೆಗಳ ಅಭಿವೃದ್ಧಿಯಾಯಿತು ಮತ್ತು ಈಗಲೂ ಪದಗಳನ್ನು ವಿಸ್ತರಿಸುವ ಕೆಲಸ ಚಾಲ್ತಿಯಲ್ಲಿದೆ." 133   ಅಲೆಕ್ಸೀವ್‍‍ನ ವಿಭಾಗೀಕರಣದಿಂದಾಗಿ ಸ್ಪಷ್ಟವಾಗುವ ಅಂಶವೇನೆಂದರೆ ಕರ್ನಾಟಕದಲ್ಲಿ ಮನುಷ್ಯ ವಾಸದ ಮೊದಲ ಕುರುಹುಗಳು ಲಭ್ಯವಾಗ...

ಮೋದಿ ಸರ್ಕಾರದ ಕೃಷಿ ಕಾಯಿದೆಗಳ ಅಸಲೀಯತ್ತೂ… ರೈತಾಪಿ ಹೋರಾಟ ಸಾಗಬೇಕಾದ ಹಾದಿಯೂ#modi govt#agri laws# peasant movement

  ಮೋದಿ ಸರ್ಕಾರದ ಕೃಷಿ ಕಾಯಿದೆಗಳ ಹಿಂದಿನ ಅಸಲೀಯತ್ತೂ … ರೈತಾಪಿ ಹೋರಾಟ ಸಾಗಬೇಕಾದ ಹಾದಿಯೂ …… ನಮ್ಮ ದೇಶದ ಸಾಮಾನ್ಯ ರೈತಾಪಿಗಳನ್ನು ಹತ್ತು ಹಲವು ಪ್ರಕ್ಷುಭ್ದ ಪರಿಸ್ಥಿತಿಗಳಿಗೆ ದೂಡುತ್ತಾ ಬರಲಾಗಿದೆ. ದೇಶದ ಆರ್ಥಿಕತೆಯಲ್ಲಿ ರೈತಾಪಿಗಳದು ಅತೀ ಪ್ರಮುಖವಾದ ಹಾಗೇನೇ ಬುನಾದಿಯುತ ಕೊಡುಗೆಯಾಗಿದ್ದರೂ ಅವರನ್ನು ಜೀತಗಾರರು ನವಜೀತಗಾರರಂತೆ ದುಡಿಸಿಕೊಳ್ಳುತ್ತಾ ಬರಲಾಗುತ್ತಿದೆ. ಇಲ್ಲಿ ರೈತಾಪಿಗಳೆಂದಾಗ ಪ್ರಮುಖವಾಗಿ   ಜೀತಗಾರರು, ಗೇಣಿದಾರರು, ಭೂಹೀನ ರೈತರು, ಬಡ ರೈತರು ಪ್ರಧಾನವಾಗುತ್ತಾರೆ. ಬಹುಸಂಖ್ಯಾತ ರೈತಾಪಿಗಳು ಇವರೇ ಆಗಿದ್ದಾರೆ. ಇದರಲ್ಲಿ ಪ್ರಧಾನವಾಗಿ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳಿಗೆ ಸೇರಿದವರೇ ಬಹುಸಂಖ್ಯಾತರು ಎನ್ನುವ ಅಂಶವನ್ನು ಮರೆಯಕೂಡದು. ಯಾಕೆಂದರೆ ದೇಶದ ಉತ್ಪಾದನೆಯಲ್ಲಿ ಇವರದು ಅತೀ ಪ್ರಮುಖ ಕೊಡುಗೆಯಾಗಿದೆ. ಆದರೆ ಆ ಪರಿಗಣನೆ ಅವರಿಗೆ ಸಿಗುತ್ತಿಲ್ಲ. ದೇಶದ ಒಟ್ಟು ವಾರ್ಷಿಕ ಉತ್ಪಾದನೆಯಲ್ಲಿ ಕೃಷಿ ಕ್ಷೇತ್ರದ ಕೊಡುಗೆಯೇ ಪ್ರಧಾನ. ಆದರೆ ಕೃಷಿ ಕ್ಷೇತ್ರಕ್ಕೆ ಸೇರಿದ ಕಾಫಿ, ಏಲಕ್ಕಿ, ಚಹಾ, ರಬ್ಬರ್, ಕೋಕೋ, ಸೆಣಬು ಮೊದಲಾದವುಗಳನ್ನು ಕೈಗಾರಿಕಾ ಪಟ್ಟಿಗೆ ಸೇರಿಸಿ ಅವುಗಳನ್ನು ಕೈಗಾರಿಕಾ ಉತ್ಪನ್ನ ಎಂಬಂತೆ ಪರಿಗಣಿಸಲಾಗುತ್ತಿದೆ. ಇವಲ್ಲದೇ ಹಲವಾರು ಕೈಗಾರಿಕೆಗಳಿಗೆ ಕಚ್ಚಾ ವಸ್ತುಗಳು ಕೃಷಿ ಮೂಲದ್ದೇ ಆಗಿವೆ ಎಂಬ ಸತ್ಯವನ್ನು ವ್ಯವಸ್ಥಿತವಾಗಿ ಮರೆಮಾಚುತ್ತಾ ಬರಲಾಗಿದೆ. ಆಶ್ಚರ್ಯವಾದರೂ...