Skip to main content

Posts

Showing posts from December, 2020

ಮೇಕಿಂಗ್ ಹಿಸ್ಟರಿ ಸಂಪುಟ 1#making history#introduction

  ಮೇಕಿಂಗ್ ಹಿಸ್ಟರಿ ಸಂಪುಟ 1 ಆಂಗ್ಲ ಮೂಲ : ಸಾಕಿ ಕನ್ನಡ ರೂಪಾಂತರ: -ಡಾ. ಕೆ ಆರ್ ಅಶೋಕ್ -ನಂದಕುಮಾರ್ ಕೆ ಎನ್ . ಕುಂಬ್ರಿಉಬ್ಬು   ಪರಿಚಯ ಮೇಕಿಂಗ್ ಹಿಸ್ಟರಿ ಕರ್ನಾಟಕದ ಗತಕಾಲದ ನಿರೂಪಣೆಯೂ ಹೌದು ವಿಶ್ಲೇಷಣೆಯೂ ಹೌದು . ಭೌಗೋಳಿಕ ಮತ್ತು ಪ್ರಾಕೃತಿಕ ರೂಪಲಕ್ಷಣಗಳ ಸಂಕ್ಷಿಪ್ತ ವಿವರಗಳೊಂದಿಗೆ ಪ್ರಾರಂಭವಾಗುವ ಈ ಕೃತಿ , ಕರ್ನಾಟಕದಲ್ಲಿ ಮಾನವ ವಾಸದ ಗುರುತುಗಳು ಕಂಡು ಬಂದ ಸಮಯದಿಂದ ಆದ ಸಾಮಾಜಿಕ ಬೆಳವಣಿಗೆಗಳ ಕುರುಹುಗಳನ್ನು ಹುಡುಕುತ್ತದೆ . ಹಳೇ ಶಿಲಾ ಯುಗದ ಕಾಲದಿಂದ ಆರಂಭವಾಗುವ ಈ ಅಧ್ಯಯನ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಗೆಲ್ಸ್ 150 ವರುಷಗಳ ಹಿಂದೆ ಅಭಿವೃದ್ಧಿ ಪಡಿಸಿದ ಚಾರಿತ್ರಿಕ ಭೌತಿಕವಾದಿ (Historical Materialism) ಮಾದರಿಯನ್ನು ಅಳವಡಿಸಿಕೊಂಡಿದೆ . ಮಾರ್ಕ್ಸ್ ಮತ್ತು ಏಂಗೆಲ್ಸ್ ಇದನ್ನು ಅಭಿವೃದ್ಧಿ ಪಡಿಸಿದ ನಂತರ ಈ ಮಾದರಿಯನ್ನು ತುಂಬ ಪರಿಣಾಮಕಾರಿಯಾಗಿ ಉಪಯೋಗಿಸಲಾಗಿದೆ. ಈ ಮಾದರಿಯು ಸಮಾಜವು ಸ್ವಯಂ ಗ್ರಹಿಕೆಯಿಂದ ಅತ್ಯದ್ಭುತ ಸಾಧನೆಗಳನ್ನು ಮಾಡುವುದಕ್ಕೆ ಸಹಾಯ ಮಾಡುವುದರ ಜೊತೆಗೆ ಸಮಾಜದ ಬದಲಾವಣೆಗೂ ತನ್ನ ಕಾಣಿಕೆಯನ್ನು ನೀಡಿದೆ . ಕರ್ನಾಟಕದ ಗತಕಾಲದ ಕುರಿತಾದ ಈ ಹುಡುಕಾಟದಲ್ಲಿ ನಾವು ಮಾರ್ಕ್ಸ್ ವಾದದ ಅಮೂಲ್ಯ ಖಜಾನೆಗೆ ಋಣಿಯಾಗಿದ್ದೇವೆ . ಇಂಡಿಯಾ ದ ಪೂರ್ವೇತಿಹಾಸವನ್ನು ಕೆಲವೇ ಕೆಲವು ಮಾರ್ಕ್ಸ್ ವಾದಿ ಇತಿಹಾಸಕಾರರು ಸಂಶೋಧಿಸಿದ್ದಾರೆ . ಸರಿಯಾದ ಇತಿಹಾಸದ...

ಗಂಭೀರ ವಿಚಾರಗಳನ್ನು ಬಿಚ್ಚಿಟ್ಟ ನೌಕರರ ಮುಷ್ಕರ# KSRTC WORKERS STRIKE 2020#exposed serious matters.

   ಗಂಭೀರ ವಿಚಾರಗಳನ್ನು ಬೀದೀಲಿ ಬಿಚ್ಚಿಟ್ಟ ರಾಜ್ಯ ಸಾರಿಗೆ ನೌಕರರ ಮುಷ್ಕರ ! ಕರ್ನಾಟಕ ಸರಕಾರದ ಸಾರಿಗೆ ಕಾರ್ಮಿಕರು ಹಾಗೂ ನೌಕರರು ಇದೇ ಡಿಸೆಂಬರ್ ಹತ್ತರಂದು ದಿಢೀರ್ ಎಂದು ಮುಷ್ಕರ ಹೂಡಿ ತಮ್ಮ ಹತ್ತು ಹಕ್ಕೊತ್ತಾಯಗಳನ್ನು ಸರ್ಕಾರದ ಮುಂದೆ ಇಟ್ಟಿದ್ದರು. ಬಿ. ಎಮ್. ಟಿ. ಸಿ, ಕೆ ಎಸ್ ಆರ್ ಟಿ ಸಿ, ಈಶಾನ್ಯ, ವಾಯುವ್ಯ ಸೇರಿದಂತೆ ನಾಲ್ಕೂ ವಿಭಾಗಗಳ ಬಹುತೇಕ ಸರಕಾರಿ ಸಾರಿಗೆ ನೌಕರರು ಈ ಮುಷ್ಕರದಲ್ಲಿ ಭಾಗಿಯಾಗಿದ್ದರು. ಸರಕಾರದ ಒಡೆದಾಳುವ ನೀತಿ ಹಾಗೂ ಕುಟಿಲ ವಿಳಂಬ ನೀತಿಯಿಂದಾಗಿ ನಾಲ್ಕು ದಿನಗಳ ಕಾಲ ನಡೆದ ಈ ಮುಷ್ಕರದಿಂದ ರಾಜ್ಯದ ಸಾರಿಗೆ ಸಂಪರ್ಕ ವ್ಯವಸ್ಥೆ ದಿಕ್ಕೆಟ್ಟುಹೋಗಿತ್ತು. ಹಕ್ಕೊತ್ತಾಯಗಳಲ್ಲಿ ಬಹುಮುಖ್ಯವಾಗಿ ತಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಿ ಅದರಂತೆ ಸಂಬಳ ಭತ್ಯೆ ಸವಲತ್ತುಗಳನ್ನು ಒದಗಿಸಬೇಕೆಂಬುದಾಗಿತ್ತು. ಸರಕಾರಿ ನೌಕರರೆಂದು ಪರಿಗಣಿಸಬೇಕೆಂಬ ಹಕ್ಕೊತ್ತಾಯ ಹೊರತುಪಡಿಸಿ ಉಳಿದ ಹಕ್ಕೊತ್ತಾಯಗಳನ್ನು ಮಾನ್ಯ ಮಾಡುವುದಾಗಿ ಸರಕಾರ ಲಿಖಿತವಾಗಿ ಹೇಳಿಕೆ ಕೊಟ್ಟಿದ್ದ ಕಾರಣ ಹೇಳಿ ನೌಕರರು ಮುಷ್ಕರವನ್ನು ತಾತ್ಕಾಲಿಕವಾಗಿ ವಾಪಾಸು ಪಡೆದುಕೊಂಡರು. ಈಗ ಸಾರಿಗೆ ಮುಷ್ಕರದಿಂದ ಅಸ್ತವ್ಯಸ್ತವಾಗಿದ್ದ ಜನಜೀವನ ಸಾಮಾನ್ಯವಾಗತೊಡಗಿದೆ.  ಸರಕಾರ ಲಿಖಿತವಾಗಿ ಒಪ್ಪಿರುವ ನೌಕರರ ಒಂಬತ್ತು ಹಕ್ಕೊತ್ತಾಯಗಳಲ್ಲಿ ಕೋವಿದ್ 19 (ಕೊರೊನಾ) ನಿಂದ ಮರಣ ಹೊಂದಿದ ನೌಕರರಿಗೆ ಸರಕಾರಿ ನೌಕರರಿಗೆ ನೀಡುವಂತೆ ಮೂವತ್...

ಡಿಸೆಂಬರ್ ಆರು…. ದೇಶಕ್ಕೆ ನೋವು#december 6# sad#black

  ಡಿಸೆಂಬರ್ ಆರು … . ದೇಶಕ್ಕೆ ನೋವು, ವಿಷಾಧ, ಸಂಕಟ ಹಾಗೂ ಕರಾಳದಿನ … ಇಂಡಿಯಾದ ವಿಚಾರದಲ್ಲಿ ಡಿಸೆಂಬರ್ ಆರು ಯಾವಾಗಲೂ ನೆನಪಿನಲ್ಲಿ ಇಡಬೇಕಾದ ದಿನವಾಗಿದೆ. 1956 ರ ಡಿಸೆಂಬರ್ ಆರರಂದು ಡಾ ಅಂಬೇಡ್ಕರ್ ರು ತಮ್ಮ ಸಂಘರ್ಷಮಯ ಜೀವನದ ಅಂತಿಮಯಾತ್ರೆ ಮುಗಿಸಿದರು. ಈ ಸುದ್ಧಿ ತಿಳಿದು ಅವರ ಅಂತಿಮ ದರುಶನಕ್ಕಾಗಿ ಲಕ್ಷಾಂತರ ಜನರು ಮುಂಬೈಯ ಅವರ ಮನೆಯ ಸುತ್ತ ಮುತ್ತ ನೆರೆದಿದ್ದರು. ತಡೆಯಲಾಗದ ದುಃಖಗಳಿಂದ ಕುಸಿದು ಹೋಗಿದ್ದರು. ಈ ದೇಶದ ಅತ್ಯಂತ ಶೋಷಣೆಗೊಳಗಾದ ಅಸ್ಪೃಷ್ಯರು ಇನ್ನಿತರ ದಲಿತ ದಮನಿತ ಬಡವರ ಪರವಾಗಿ ಚಿಂತಿಸಿ ಹೋರಾಡಿ, ವಿಚಾರ ಮಂಡಿಸಿ ದಣಿದ ಆ ಜೀವ ತನ್ನ ಕೊನೆಯ ಉಸಿರೆಳೆದು ಮಲಗಿದ್ದನ್ನು ಕಲ್ಪಸಲು ಕೂಡ ಅವರಿಗೆ ಸಾಧ್ಯವಾಗಿರಲಿಲ್ಲ. ಅದು ಅತೀವ ಸಂಕಟ, ನೋವು, ಭಾವೋದ್ವೇಗಗಳ ರಭಸದ ಗಳಿಗೆಯಾಗಿತ್ತು. ದನಿಯಿಲ್ಲದವರ ದನಿಯಾಗಿ, ಗುಲಾಮಿತನಕ್ಕೆ ಸಿಕ್ಕವರ ಅಭಿಮಾನದ ಸಂಕೇತವಾಗಿ, ಕ್ರೂರಾತಿಕ್ರೂರ ಜಾತಿ ಶೋಷಣೆಯಿಂದ ವಿಮೋಚನೆಯಾಗಬಯಸಿದವರಿಗೆ ಒಂದು ವೈಚಾರಿಕ ದಾರಿದೀಪವಾಗಿದ್ದ ಡಾ ಬೀಮರಾವ್ ರಾಮ್ ಜಿ ಅಂಬೇಡ್ಕರ್ ತಮ್ಮ ಭೌತಿಕ ಜೀವನಕ್ಕೆ ಅಂದು ವಿದಾಯ ಹೇಳಿದ್ದರು. ಆದರೆ ಅವರು ತಮ್ಮ ಹೋರಾಟ ಹಾಗೂ ಚಿಂತನೆಗಳಿಂದ ಈಗಲೂ ದಲಿತ ದಮನಿತ ಜನಸಾಮಾನ್ಯರ ಮದ್ಯೆ ಜೀವಂತವಾಗಿದ್ದಾರೆ. ಅಂದಿನಿಂದಲೂ ಇಂಡಿಯಾದ ದಲಿತ ದಮನಿತರು ಪ್ರತೀ ವರ್ಷ ಡಿಸೆಂಬರ್ ಆರನ್ನು ಮಹಾಪರಿನಿರ್ವಾಣ ದಿನವನ್ನಾಗಿ ಆಚರಿಸುತ್ತಾ ಬಂದಿದ್ದರು. ಡಿಸೆಂಬರ್ ಆರರಂದ...