Skip to main content

Posts

Showing posts from January, 2020

ಗಣರಾಜ್ಯೋತ್ಸವದ ಆಚೆಗೂ # republic day# india

ಗಣರಾಜ್ಯೋತ್ಸವದ ಆಚೆಗೂ… ಈಚೆಗೂ…. ಇಂಡಿಯಾ ದೇಶ ತನ್ನ 71ನೆಯ ಗಣರಾಜ್ಯೋತ್ಸವವನ್ನು ಹಾದು ಹೋಗುತ್ತಿದೆ. 1950 ಜನವರಿ 26ರಂದು   ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತರಲಾಗಿದೆ ಎಂದು ಅಧೀಕೃತವಾಗಿ ಘೋಷಿಸಲಾಯಿತು. ಇದೊಂದು   ಗಣರಾಜ್ಯವೆಂದು ಕರೆಯಲಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆ   ಪ್ರಜೆಗಳ ಸಾರ್ವಭೌಮತ್ವವೇ ನೀತಿಯೆಂದು ಹೇಳಲಾಯಿತು. ಬ್ರಿಟೀಷರ ನೇರ ಆಳ್ವಿಕೆ ಕೊನೆಯಾದ ಆಗಸ್ಟ್ 15   1947 ರಿಂದ 1950ರ ಜನವರಿ 26ರವರೆಗೆ ಯೂನಿಯನ್ ಆಫ್ ಇಂಡಿಯಾ ಎಂದೇ ಕರೆಯಲಾಗಿತ್ತು. ಅವಿರತವಾಗಿ ನಡೆಸಿದ ಜನಸಾಮಾನ್ಯರ ಸ್ವಾತಂತ್ರ್ಯ ಸಂಗ್ರಾಮದ ಮೂಲಕ ಬ್ರಿಟಿಷರ ನೇರ ಆಡಳಿತದಿಂದ ಹೊರಬಂದ ನಂತರದ   ಈ ಎಪ್ಪತ್ತಮೂರು ವರುಷಗಳಲ್ಲೂ ಇಂಡಿಯಾದ ಜನಸಾಮಾನ್ಯರು ನಿರಂತರವಾಗಿ ಹೋರಾಟಗಳಲ್ಲಿರಬೇಕಾದ ಅನಿವಾರ್ಯ ಸ್ಥಿತಿಯನ್ನು ಆಳುವ ಶಕ್ತಿಗಳು ಒಡ್ಡುತ್ತಲೇ ಬಂದಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ನೆಲೆಯೂರಬೇಕಾದರೆ ಜನತೆಯ ಸಕ್ರಿಯ ರಾಜಕೀಯ ಪಾಲ್ಗೊಳ್ಳುವಿಕೆ ಅತ್ಯಗತ್ಯವೆನ್ನುವುದು ನಿಜ. ಆದರೆ ನಮ್ಮ ದೇಶದಲ್ಲಿ ಯಾವ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ಬ್ರಿಟೀಷರ ವಿರುಧ್ಧ ಹೋರಾಡುತ್ತಾ ಬರಲಾಗಿತ್ತೋ ಮೂಲಭೂತವಾಗಿ ಅವೇ ಕಾರಣಕ್ಕಾಗೇ ಈಗಲೂ ಹೋರಾಡಬೇಕಾದ ಸ್ಥಿತಿಯೇ ಮುಂದುವರೆದಿದೆ. ಅದು ಭಾರಿ ಕಾರ್ಪೋರೇಟುಗಳ ಹಿಡಿತ, ಭಾರಿ ಆಸ್ತಿವಂತ ವರ್ಗಗಳು ಹಿಡಿತ, ಭಾಷಾ ಹಕ್ಕುಗಳು, ರಾಜ್ಯಗಳ ಹಕ್ಕುಗಳು,...

ಡಿ ವೈ ಎಸ್ ಪಿ ದೇವಿಂದರ್ ಸಿಂಗ್#Davinder singh#arrest...

ಡಿ ವೈ ಎಸ್ ಪಿ ದೇವಿಂದರ್ ಸಿಂಗ್ ಬಂಧನದ ಹಿಂದಿಲ್ಲವೇ ನಿಗೂಢತೆಗಳು !?   ಕೆಲವು ದಿನಗಳ ಹಿಂದೆ ದೆಹಲಿಯತ್ತ ಹೊರಟಿದ್ದ ಕಾಶ್ಮೀರದ ಡಿ ವೈ ಎಸ್ ಪಿ ದೇವಿಂದರ್ ಸಿಂಗ್ ಬಂಧನ ಈಗ ಒಂದು ಮಟ್ಟದ ಸುದ್ಧಿಗೆ ಕಾರಣವಾಗಿದೆ. ಆತನ ಜೊತೆಯಲ್ಲಿ ಉಗ್ರವಾದಿ ಚಟುವಟಿಕೆಗಳನ್ನು ನಡೆಸುತ್ತಿದ್ದವರಿದ್ದರು. ಅವರು ಹಿಜ್ಬುಲ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ. ಅವರ ಮನೆಯಲ್ಲಿ ಏಕೆ 47 ನಂತಹ ಬಂದೂಕು ಹಾಗೂ ಎರಡು ಪಿಸ್ತೂಲುಗಳು ದೊರೆತಿವೆ. ತನ್ನ ಮನೆಯಲ್ಲಿಉಗ್ರವಾದಿ ಸಂಘಟನೆಗಳ ಸದಸ್ಯರಿಗೆ ಆಶ್ರಯ ಕಲ್ಪಿಸಿದ್ದರು. ಅವರು ದೇಶದ ರಾಜಧಾನಿ ದೆಹಲಿಯಲ್ಲಿ ಬಾಂಬ್ ಸ್ಫೋಟ ಮೊದಲಾದ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜನೆ ಹೆಣೆದಿದ್ದರು ಎನ್ನುವುದು ಸುದ್ದಿಯ ಮುಖ್ಯ ವಿಚಾರವಾಗಿದೆ. ಜನವರಿ 26ರ ಗಣರಾಜ್ಯ ದಿನೋತ್ಸವದಂದು ವಿಧ್ವಂಸಕ ಕೃತ್ಯಗಳ ಯೋಜನೆ ಅವರದಾಗಿತ್ತೆ ಎಂಬ ಬಗ್ಗೆ ತನಿಖೆಯಾಗಲಿದೆಯೆಂದು ವರದಿಯಾಗಿದೆ.   ಅದಕ್ಕಿಂತಲೂ ಮುಖ್ಯವಾಗಿರುವ ಮತ್ತೊಂದು ವಿಚಾರವಿದೆ. ಅದೇನೆಂದರೆ ಇದೇ ದೇವಿಂದರ್ ಸಿಂಗ್ ತನ್ನನ್ನು ವಶಕ್ಕೆ ತೆಗೆದುಕೊಂಡು ಚಿತ್ರಹಿಂಸೆ ನೀಡಿ ಸಂಸತ್ ಭವನದ ಮೇಲಿನ ಧಾಳಿಯಲ್ಲಿ ಪಾಲ್ಗೊಂಡವರಲ್ಲಿ ಒಬ್ಬನಿಗೆ ದೆಹಲಿಗೆ ಕರೆದುಕೊಂಡು ಹೋಗಿ ವಸತಿ ವ್ಯವಸ್ಥೆ ಮಾಡಿಕೊಡುವಂತೆ ಒತ್ತಾಯಿಸಿದ್ದರು ಎಂದು ಅಫ್ಜಲ್ ಗುರು ತನ್ನ ವಕೀಲರಿಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದರು. ಆ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್...

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ # chickmagaluru jilla saahitya smmelana..

ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ        ಬಿಚ್ಚಿಟ್ಟ ಸತ್ಯಗಳು! ಪ್ರಕೃತಿಯ ಹಚ್ಚ ಹಸುರಿನ, ಬೆಟ್ಟ ಗುಡ್ಡಗಳ, ಝರಿ ತೊರೆ ಜಲಪಾತ, ನದಿಗಳ ರಮ್ಯ ತಾಣವಾದ ಮಲೆನಾಡಿನ ಒಂದು ಮುಖ್ಯ ಜಿಲ್ಲೆ ಚಿಕ್ಕಮಗಳೂರು ಈಗ ರಾಜ್ಯ ಮಟ್ಟದ ಸುದ್ದಿಗೆ ಗ್ರಾಸವಾಗಿದೆ. ಇದೇ ಜನವರಿ 10 ಹಾಗೂ 11 ರಂದು ಶೃಂಗೇರಿಯಲ್ಲಿ ಅಯೋಜಿಸಲಾಗಿದ್ದ 16ನೇ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವೇ ಈ ಸುದ್ಧಿಯ ಮೂಲ. ಎರಡು ದಿನಗಳಿಗೆ ನಿಗದಿಯಾಗಿದ್ದ ಸಮ್ಮೇಳನ ಒಂದು ದಿನದ ಕಾರ್ಯಕ್ರಮದ ಅಂತ್ಯದೊಂದಿಗೆ ಮುಂದೂಡುವಂತೆ ಮಾಡಿ ಅದು ಪೂರ್ಣಗೊಳ್ಳದಂತೆ  ಮಾಡಲಾಗಿದೆ. ಕಲ್ಕುಳಿ ವಿಠಲ ಹೆಗಡೆಯವರ ಅಧ್ಯಕ್ಷತೆಯ ವಿಚಾರ ಮುಂದಿಟ್ಟುಕೊಂಡು ಸಂಘ ಪರಿವಾರ ಈ ಸಮ್ಮೇಳನ ನಡೆಯದಿರುವಂತೆ ಮೊದಲಿನಿಂದಲೂ ಶ್ರಮಿಸುತ್ತಾ ಬಂದಿತ್ತು. ‘ಸಾಹಿತ್ಯ ಪರಿಷತ್ ಉಳಿಸಿ.’ ‘ನಕ್ಸಲ್ ವಿರೋಧಿ ವೇದಿಕೆ’ ಎಂದೆಲ್ಲಾ ಹೆಸರಿನಲ್ಲಿ ಸಮ್ಮೇಳನದ ವಿರುದ್ಧ ಕರಪತ್ರಗಳನ್ನು ಹಂಚಿತು. ಅಪಪ್ರಚಾರ ನಡೆಸಿತು. ಸಮ್ಮೇಳನಕ್ಕೆ ಜನರು ಸೇರದಂತಿರಲು ಎಲ್ಲಾ ಪ್ರಯತ್ನ ಹಾಕಿತು. ಅದೇ ದಿನ ಬಂದ್ ಕರೆ ನೀಡಿತು. ಆದರೆ ಸಂಘಪರಿವಾರದ ಎಲ್ಲಾ ಪ್ರಯತ್ನಗಳನ್ನೂ ಮೀರಿ ಜನರು ಸಾವಿರದ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಪಾಲ್ಗೊಂಡರು. ಅದುವರೆಗೂ ಇಲ್ಲದ ಆ ಸಂಘಟನೆಗಳ ಅಸ್ತಿತ್ವಗಳೇ ಪ್ರಶ್ನಾರ್ಹವಾಗಿವೆ. ಮೊದಲನೇ ದಿನವೇ ಕೆಲವು  ಯುವಕರ ತಲೆಕೆಡಿಸಿ ಸಮ...