ಮೀಸಲಾತಿಗೆ ಮೀಸಲೇ ಇಲ್ಲದಂತೆ ಮಾಡಿರುವ ಜಾಗತೀಕರಣ! ? ಜಾಗತೀಕರಣ ಪ್ರಾರಂಭವಾದಾಗಿನಿಂದ ಮೊದಲು ಸ್ವಲ್ಪ ಮಟ್ಟದಲ್ಲಿ ಇದ್ದ ಅವಕಾಶಗಳೂ ಕೂಡ ಇಲ್ಲದಂತಾಗುತ್ತಾ ಬಂದು ಇದೀಗ ಅಂತಹ ಅವಕಾಶಗಳು ಪೂರ್ಣವಾಗಿ ನಿಂತುಹೋಗುವ ಪರಿಸ್ಥಿತಿ ಬಂದಿದೆ . ಸರಕಾರ ಮಾಡಬೇಕಾ ಗಿ ದ್ದ ಸಾಮಾಜಿಕ ಕ್ಷೇಮಾಭಿವೃದ್ಧಿ ಕಾರ್ಯಗಳು ಕಾರ್ಪೊರೆಟ್ ಗಳು ನುಂಗುತ್ತಿವೆ . ಸರಕಾರದ ಅಡಿಯಲ್ಲಿ ಯಾವ ಕ್ಷೇತ್ರವೂ ಇಲ್ಲದಂತೆ ಕಾರ್ಪೊರೆಟ್ ಗಳಿಗೆ ಬಿಟ್ಟುಕೊಡುವ ಕಾರ್ಯ ಉನ್ನತ ಘಟ್ಟಕ್ಕೆ ಬಂದು ನಿಂತಿದೆ . ದಲಿತ ದಮನಿತರಿಗೆ ಸಾಂವಿಧಾನಿಕವಾಗಿ ಸಿಗಬೇಕಾಗಿದ್ದ ಒಂದಷ್ಟು ಅನುಕೂಲಗಳು ಕ್ಷೇತ್ರಗಳೇ ಇಲ್ಲದಿರುವುದರಿಂದಾಗಿ ಸಿಗುತ್ತಿಲ್ಲ . ಜಾಗತೀಕರಣ ಆರಂಭವಾಗಿ ಮೂರು ದಶಕಗಳಾಗುತ್ತಾ ಬರುತ್ತಿರುವಾಗ ಭಾರತದ ಸಂಪತ್ತು ಕೆಲವೇ ಕೆಲವು ಕಾರ್ಪೊರೆಟುಗಳ ಕೈಗೆ ಹೋಗಿ ಸೇರಿಕೊಂಡಾಗಿದೆ . ಅಸಮಾನತೆಯ ಮಟ್ಟ ಇಳಿಕೆಯಾಗುವುದರ ಬದಲು ಇನ್ನಿಲ್ಲದಂತಹ ರೀತಿಯಲ್ಲಿ ಏರಿಕೆಯ ಗತಿಯಲ್ಲಿ ಧಾವಿಸುತ್ತಿದೆ . ದಲಿತ ದಮನಿತರಲ್ಲಿನ ಒಂದಷ್ಟು ಅನುಕೂಲಸ್ಥರು ಇದುವರೆಗೂ ಅನುಭವಿಸಿಕೊಂಡು ಬಂದಿದ್ದ ಸವಲತ್ತುಗಳೂ ಕೂಡ ಇಲ್ಲದಂತಾಗುತ್ತಿದೆ . ಬಡ್ತಿ ಮೀಸಲಾತಿ ಅವುಗಳಲ್ಲಿ ಒಂದು . ಚಂದ್ರಭಾನ್ ಪ್ರಸಾದ್ ರಂತಹವರು ದಲಿತರು ಬಂಡವಾಳಿಗರಾಗಿ ಕಾರ್ಪೋರೇಟುಗಳಾಗಿ ಹೊರಹೊಮ್ಮಿದರೆ ಜಾತೀಯ ದೌರ್ಜನ್ಯ ...