ಭ್ರಷ್ಟಾಚಾರವೇ ಆಡಳಿತವೂ… ಸತ್ಯೋತ್ತರ ಕಾಲಘಟ್ಟವೂ… -ನಂದಕುಮಾರ್ ಕುಂಬ್ರಿ ಉಬ್ಬು ಮಿಂಚಂಚೆ: nandakumarnandana67@gmail.com ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಒಂದು ಭಾರಿ ಕಾರ್ಪೋರೇಟ್ ಇನ್ಫೋಸಿಸ್ ಹಾಗೂ ಈ ಹಿಂದೆ ಕರ್ನಾಟಕದಲ್ಲಿ ಕಾರ್ಯಾಚರಿಸಿದ್ದ ದೊಡ್ಡ ಎಲೆಕ್ಟ್ರಾನಿಕ್ ಕಂಪನಿಯಾದ ಬಿಪಿಎಲ್ ಗೆ ಕರ್ನಾಟಕ ಸರ್ಕಾರ ರಿಯಾಯಿತಿಯಲ್ಲಿ ಕೈಗಾರಿಕಾಭಿವೃದ್ದಿ ಹಾಗೂ ಉದ್ಯೋಗಾವಕಾಶಗಳ ನಿರ್ಮಾಣಕ್ಕಾಗಿ ನೀಡಿದ್ದ ಭೂಮಿಗಳನ್ನು ನಿಯಮ ಮೀರಿ ಮಾರುಕಟ್ಟೆ ದರದಲ್ಲಿ ಮಾರಿ ಭಾರಿ ಲಾಭ ಮಾಡಿಕೊಂಡಿದ್ದರ ವರದಿಗಳು ಇತ್ತೀಚೆಗೆ ಹೊರಬಂದವು. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿಯ ಇನ್ಫೋಸಿಸ್ ಕಂಪನಿಯು ಬೆಂಗಳೂರಿನ ಅತ್ತಿಬೆಲೆಯಲ್ಲಿನ ಐವತ್ಮೂರೂವರೆ ಏಕರೆಗಳ ಭೂಮಿಯನ್ನು ಇನ್ನೂರೈವತ್ತು ಕೋಟಿ ರೂಪಾಯಿಗಳಿಗೆ ರಿಯಲ್ ಎಸ್ಟೇಟ್ ಕ್ಷೇತ್ರದ ಭಾರಿ ಕುಳವಾದ ಪೂರ್ವಂಕ...