Skip to main content

Posts

Showing posts from March, 2024

‘ವಿಷವಟ್ಟಿ ಸುಡುವಲ್ಲಿ’#ರಾಷ್ಟ್ರೀಯ ಶಿಕ್ಷಣ ನೀತಿ# national educaion policy# vishavatti suduvalli book review

  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಬಿಚ್ಚಿಡುವ ‘ವಿಷವಟ್ಟಿ ಸುಡುವಲ್ಲಿ’ ಲೇಖಕರು-ಬಿ ಶ್ರೀಪಾದ ಭಟ್   ಶಿಕ್ಷಣವು ಒಂದು ಸಮಾಜದ ನಾಗರಿಕ ಪ್ರಜ್ಞೆಯನ್ನು, ಬದುಕಿನ ಮಟ್ಟ, ಬದುಕಿನ ರೀತಿ, ದಿಕ್ಕು,   ಗುರಿ ಹಾಗೂ ಸಾಮಾಜಿಕ ಕರ್ತವ್ಯಗಳನ್ನು ತೀರ್ಮಾನಿಸುವ ಬಹಳ ಮಹತ್ವದ ವಿಚಾರವಾಗಿದೆ. ಮಾನವ ಸಂಪನ್ಮೂಲವನ್ನು ಗುಣಾತ್ಮಕ, ಸೃಜನಶೀಲ ಹಾಗೂ ಕ್ರಿಯಾಶೀಲಗೊಳಿಸಲು ಇರುವ ಪ್ರಧಾನ ಸಾಧನವಾಗಿದೆ. ಶಿಕ್ಷಣವು ಸಮಾಜದ ಸಾಮೂಹಿಕ ಕೊಡುಗೆಯಾಗಿರುತ್ತದೆ. ಒಂದು ಸಮಾಜವು ಸಾಗಿಬಂದ ಪಯಣದ ಹಾದಿಯಲ್ಲಿ ಉತ್ಪಾದಿಸಿದ ವಸ್ತುಗಳು, ಅದಕ್ಕೆ ಹೊಂದಿಕೊಂಡಿರುವ ಚಟುವಟಿಕೆಗಳು ಮತ್ತು ಅದರಿಂದ ಉತ್ಪತ್ತಿಯಾದ ಎಲ್ಲಾ ರಂಗಗಳಲ್ಲಿನ ವೈಜ್ಞಾನಿಕ ಜ್ಞಾನಗುಚ್ಚಗಳನ್ನು ಕ್ರೋಢೀಕರಿಸಿ ಸಮಾಜದ ಎಲ್ಲಾ ನಾಗರಿಕರ ಪುರೋಗತಿ ಹಾಗೂ ಒಟ್ಟಾರೆ ಸಮಾಜದ ಮುಂಚಲನೆಗೆ ಅಡಿಪಾಯ ಹಾಗೂ ದಾರಿಯನ್ನಾಗಿ ಮಾಡಿಕೊಳ್ಳಬೇಕಿರುತ್ತದೆ. ಅಂತಹ ವೈಜ್ಞಾನಿಕ ಅಳವಡಿಕೆಗಳನ್ನು ಮಾಡುತ್ತಾ ಸಾಗುವ ಸಮಾಜವು ಮಹೋನ್ನತವಾಗಿ ಬೆಳೆಯುತ್ತಾ ಅಭೂತಪೂರ್ವ ಸಾಧನೆಗಳನ್ನು ಸಹಜವಾಗಿ ಮಾಡುತ್ತಾ ಸಾಗುತ್ತದೆ.  ಅಲ್ಲಿ ಸಾವಿರ ಸಾವಿರ ಹೂವುಗಳರಳಿ ಸುಗಂಧ ಹಾಗೂ ಕಂಪು ಬೀರುತ್ತದೆ. ಅಲ್ಲಿ ಗಟ್ಟಿ ಫಲಗಳು ಬೆಳೆದು  ಸಮಾಜವನ್ನುಎಲ್ಲಾ ರೀತಿಯಲ್ಲಿಯೂ ಶ್ರೀಮಂತಗೊಳಿಸುತ್ತಿರುತ್ತದೆ. ಆಳುತ್ತಿರುವ   ವ್ಯವಸ್ಥೆಯೊಂದು ಎಷ್ಟು ಮಟ್ಟಿಗೆ ಪೌರರ ಶಿಕ್ಷಣಕ್ಕೆ ಗಮನ ಹಾಗೂ ಆದ್ಯತೆಯನ್...

ಜನಪರ ಸಮಾಜೋರಾಜಕೀಯ ಕಾರ್ಯಕರ್ತಎಂ ಎನ್ ಸುಂದರ್ ರಾಜ್#sociopolitical activist M N Sundar Raj#Bidar

  ಜನಪರ  ಸಮಾಜೋ ರಾಜಕೀಯ ಕಾರ್ಯಕರ್ತ ಬೀದರಿನ ಎಂ ಎನ್ ಸುಂದರ್ ರಾಜ್.   ಎಂ ಎನ್ ಸುಂದರ್ ರಾಜ್   ಸಮಾಜದ ಬಗ್ಗೆ ನೈಜ ಕಾಳಜಿ, ಸಮಾಜದ ಆರೋಗ್ಯದ ಬಗೆಗಿನ ನೈಜ ಕಳಕಳಿ ಹಾಗೂ ದಲಿತ ದಮನಿತರ ಹಾಗೂ ಮಹಿಳೆಯರ ಬಗೆಗಿನ ನೈಜ ಕಾಳಜಿಯಿಂದ ಯಾವುದೇ ವೈಯಕ್ತಿಕ ಫಲಾಪೇಕ್ಷೆ ಇಲ್ಲದೇ ಮಿಡಿಯುವ ಹಾಗೂ ದುಡಿಯುವ ಬದ್ದ ಮನಸುಗಳು ವಿರಳ ಎನ್ನುವುದು ಸಾಮಾನ್ಯವಾಗಿ ಇರುವ ಅಭಿಪ್ರಾಯಗಳಾಗಿವೆ.   ಆದರೆ ಇದು ಸರಿಯಾದ ಅಭಿಪ್ರಾಯಗಳಲ್ಲ ಎನ್ನಲು ಕಳೆದ ತಿಂಗಳು ತಮ್ಮ ಕೊನೆಯುಸಿರು ಎಳೆದ ಕಾ. ಸುಂದರ್ ರಾಜ್ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಜಲ್ ರಹಿ.. ಜಲ್ ರಹೀ ಯೆ ಜಿಂದಗೀ ದೌಡ್ ಕಾ ಮಶಾಲ್ ಹೇ…ಜಲ್ ರಹಾ ಯೇ ಆಸ್ ಮಾನ್ ಸದಾ ಲಾಲ್ ಲಾಲ್ ಹೇ …ಎಂಬುದು ಅವರು ಹಾಡುತ್ತಿದ್ದ ಕೆಲವೇ ಹಾಡುಗಳಲ್ಲಿ  ಒಂದು ಬಹಳ ಅರ್ಥಪೂರ್ಣವಾದ ಹಾಡಾಗಿತ್ತು. ಉರ್ದು ಹಾಗೂ ಹಿಂದಿ ಕವಿತೆಗಳು ಹಾಗೂ ಶಾಯಿರಿಗಳನ್ನು ಆಗಾಗ್ಗೆ ತಮ್ಮ ಮಾತುಗಳ ನಡುವೆ ತಮ್ಮದೇ ಗತ್ತಿನಲ್ಲಿ ಹೇಳುತ್ತಿದ್ದರು. ಆರು ಅಡಿ ಎತ್ತರದ ಅಜಾನುಬಾಹುವಾಗಿದ್ದ ಅವರು ಕುಸ್ತಿಪಟು ಕೂಡ ಆಗಿದ್ದವರು   ಇದೇ ಮಾರ್ಚ್ 9ರಂದು ಬೀದರ ನಗರದಲ್ಲಿ ಕಾ. ಸುಂದರ್ ರಾಜ್ ರಿಗೆ ಅವರ ಗೆಳೆಯರ ಬಳಗ ಹಾಗೂ ಭಗತ್ ಸಿಂಗ್ ಟ್ರಸ್ಟ್ ವತಿಯಿಂದ ಶ್ರದ್ದಾಂಜಲಿ ಹಾಗೂ ಸ್ಮರಣಸಬೆ ಆಯೋಜಿಸಲಾಗಿದೆ.   ಬೀದರ ಜಿಲ್ಲೆ ನಾಡಿನಲ್ಲಿ ಆದ ಪ್ರಜಾತಾಂತ್ರಿಕ ಬೆಳವಣಿಗೆಯ ಒಂದು ದೊಡ್ಡ...