ಸಮಾಜಮುಖಿಗಳು ಜನಪರ ಬುದ್ದಿಜೀವಿಗಳು ಆರ್ಥಿಕ ಸಾಮಾಜಿಕ ರಾಜಕೀಯ ವಾಸ್ತವಗಳ ಕನ್ನಡಿಗಳಾಗಬೇಕು# electoral parties#intellectuals#pro peolpe activists# progressive organizations
ಸಮಾಜಮುಖಿಗಳು ಜನಪರ ಬುದ್ದಿಜೀವಿಗಳು ಆರ್ಥಿಕ ಸಾಮಾಜಿಕ ರಾಜಕೀಯ ವಾಸ್ತವಗಳ ಕನ್ನಡಿಗಳಾಗಬೇಕು. ಬದಲಿಗೆ ಚುನಾವಣೆಗಳಿಗಷ್ಟೇ ಸೀಮಿತರಾಗುವ ಶಕ್ತಿಗಳ ಕುರುಡು ಸಮರ್ಥಕರಾಗುವುದು ಅಪಾಯಕರ..... - ನಂದಕುಮಾರ್ ಕುಂಬ್ರಿ ಉಬ್ಬು nandakumarnandana@gmail.com ನಮ್ಮ ದೇಶದ ಚುನಾವಣೆಗಳನ್ನು ಭಾರಿ ಕಾರ್ಪೋರೇಟು ಹಾಗೂ ಭಾರಿ ಆಸ್ತಿವಂತ ವರ್ಗ ನೇರವಾಗಿ ನಿರ್ವಹಣೆ ಮಾಡತೊಡಗಿರುವುದನ್ನು ಗಂಭೀರವಾಗಿ ಗಮನಿಸಬೇಕು. ೨೦೧೪ ರ ಚುನಾವಣೆ ಹಾಗೂ ನಂತರದ ಚುನಾವಣೆಗಳಲ್ಲಿ ನಿರ್ವಹಣೆ ಹೇಗೆಲ್ಲಾ ನಡೆಯುತ್ತವೆ ಎಂಬುದು ಎದ್ದುಕಾಣುತ್ತಿರುವ ವಿಚಾರ. ಪಕ್ಷಗಳನ್ನೂ, ಸಂಸದರನ್ನೂ, ಶಾಸಕರುಗಳನ್ನೂ ನೇರವಾಗಿಯೇ ಭಾರಿ ಕಾರ್ಪೋರೇಟು ಸಮೂಹವು ಖರೀದಿಸಿ ತಮ್ಮ ಪರವಾಗಿ ಸರ್ಕಾರಗಳನ್ನು ರಚಿಸಿ ನಡೆಸುತ್ತಿರೋದು ಎದ್ದುಕಾಣುತ್ತಿರುವ ವಿಚಾರವಲ್ಲವೇ. ಒಂದು ವೇಳೆ ಕೆಲವು ಕಾರಣಗಳಿಂದ ಭಿನ್ನಪಕ್ಷಗಳು ಅಲ್ಪಬಹುಮತ ಪಡೆದರೂ ಅವುಗಳು ತಮ್ಮ ಪರವಾಗಿ ಕಾರ್ಯನಿರ್ವಹಿಸಲಾಗದ ಸ್ಥಿತಿಯಲ್ಲಿದ್ದರೆ ಅದರ ಶಾಸಕರುಗಳನ್ನೇ ಖರೀದಿಸಿ ತಮ್ನ ಅನುಕ...