Skip to main content

Posts

Showing posts from November, 2019

ಜೆ ಎನ್ ಯು ಮೇಲಿನ ಧಾಳಿಗಳು-j n u in attack - education system

ಜೆ ಎನ್ ಯು ಮೇಲಿನ ಧಾಳಿಗಳು ಭಾರತದ ವಿಶ್ವ ವಿದ್ಯಾಲಯ ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ಧಾಳಿಗಳಾಗಿವೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತೆ ಜಾಗತಿಕ ಸುದ್ಧಿಗೆ ಗ್ರಾಸವಾಗಿದೆ. ಸಂಕ್ಷಿಪ್ತವಾಗಿ ಜೆ ಎನ್ ಯು ಎಂದು ಕರೆಯಲ್ಪಡುವ ಈ ಕೇಂದ್ರೀಯ ವಿಶ್ವವಿದ್ಯಾಲಯ ಜಾಗತಿಕ ಮನ್ನಣೆ ಪಡೆದ ಭಾರತದ ವಿಶ್ವ ವಿದ್ಯಾಲಯವಾಗಿದೆ. ಭಾರತದಲ್ಲಿ ಜೆಎನ್ ಯುವಿನಂತಹ ವಿಶ್ವ ವಿದ್ಯಾಲಯ ಬೇರೊಂದಿಲ್ಲ. ಇಲ್ಲಿ ಅತ್ಯಂತ ಅಗ್ಗದಲ್ಲಿ ಉನ್ನತ ಶಿಕ್ಷಣವನ್ನು ಸಮಾಜದ ಎಲ್ಲಾ ಅದರಲ್ಲೂ ದಲಿತ ದಮನಿತ ವರ್ಗದ ವಿದ್ಯಾರ್ಥಿಗಳಿಗೆ ದೊರೆಯುತ್ತಾ ಬಂದಿತ್ತು. ಈ ವಿಶ್ವ ವಿದ್ಯಾಲಯ ಕಳೆದ ಕೆಲವು ವರುಷಗಳಿಂದ ವಿವಾದಗಳ ಕೇಂದ್ರವನ್ನಾಗಿ ಮಾಡಲಾಗುತ್ತಿದೆ. ಹಾಗೆ ಮಾಡುವುದರಲ್ಲಿಆಳುವಂತಹ ಶಕ್ತಿಗಳಿಗೆ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಉದ್ದೇಶಗಳಿವೆ. ಭೌದ್ಧಿಕವಾಗಿ ಮುಂಚೂಣಿಯಲ್ಲಿರುವ ಈ ವಿಶ್ವ ವಿದ್ಯಾಲಯವನ್ನು ಇಲ್ಲದಂತೆ ಮಾಡುವ   ಸಂಚುಗಳು ನಡೆಯುತ್ತಾ ಬಂದಿವೆ. ಈ ಬಗ್ಗೆ ಕರ್ನಾಟಕದ ವಿಶ್ವ ವಿದ್ಯಾಲಯಗಳ ಬೋಧಕ ವಲಯಗಳಲ್ಲಿರುವ ಬಹುತೇಕ ಪ್ರಾಧ್ಯಾಪಕರುಗಳು ಸಣ್ಣ ದನಿಯನ್ನೂ ಕೂಡ ಎತ್ತಲಾಗದಷ್ಟು ಬಲಹೀನರಾಗಿದ್ದಾರೆ ಎನ್ನುವುದು ಕಣ್ಣಿಗೇ ರಾಚುತ್ತಿರುವ ವಿಚಾರ. ಪಡೆಯುತ್ತಿರುವ ಯುಜಿಸಿ ಸಂಬಳ ಹಾಗೂ ಸವಲತ್ತುಗಳು ಅವರ ಕಣ್ಣು ಹಾಗೂ ಮೆದುಳುಗಳಿಗೆ ಗರಬಡಿಸಿದಂತೆ ಕಾಣುತ್ತಿದೆ. ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯವನ್ನು 19...

ಲ್ಯಾಟಿನ್ ಅಮೇರಿಕ ರಾಷ್ಟ್ರಗಳಲ್ಲಿ ಮುಂದುವರೆದ-latin america -bolivia crisis

ಲ್ಯಾಟಿನ್ ಅಮೇರಿಕ ರಾಷ್ಟ್ರಗಳಲ್ಲಿ ಮುಂದುವರೆದ ಅಮೇರಿಕ ಮಿತ್ರಕೂಟದ ಷಡ್ಯಂತ್ರಗಳು ಬೊಲಿವಿಯಾದಲ್ಲಿ ಅಧ್ಯಕ್ಷರ ಬಲವಂತದ ರಾಜಿನಾಮೆ- ರಾಜಕೀಯ ಪ್ರಕ್ಷುಬ್ದತೆ ರಾಷ್ಟ್ರವೊಂದು ಅಂತರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವ ಬ್ಯಾಂಕಿನಿಂದ ಸ್ವಾತಂತ್ರ್ಯ ಘೋಷಿಸುವ ಸಂಗತಿಯನ್ನು ಈ ಕಾಲದಲ್ಲಿ ಯಾರಾದರು ಕಲ್ಪಿಸಲು ಸಾಧ್ಯವೇ? ಅದು ಬಹಳ ಕಷ್ಟದ ವಿಚಾರ. ಅಭಿವೃಧ್ಧಿಯಾಗಬೇಕಾದರೆ ಇಂತಹ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳ ನೆರವನ್ನು ಖಂಡಿತಾ ಪಡೆಯಲೇ ಬೇಕು ಎನ್ನುವ ಪ್ರತಿಪಾದನೆಯವರೆ ಹೆಚ್ಚಾಗಿ ಕಂಡುಬರುತ್ತಾರೆ. ಸಾಲ ತರದೇ ಅಭಿವೃಧ್ಧಿ ಸಾಧ್ಯವೇ ಇಲ್ಲ ಎಂಬ ಕಲ್ಪನೆಯನ್ನು ತಮ್ಮ ತಲೆಗಳಲ್ಲಿ ಅಳವಡಿಸಿಕೊಳ್ಳುವಂತಹ ವಾತಾವರಣ ನಿರ್ಮಾಣಮಾಡಲಾಗಿದೆ. ಅದರಲ್ಲೂ ನಗರ ಕೇಂದ್ರಿತ ಮಧ್ಯಮವರ್ಗವಂತೂ ಇಂತಹ ಪ್ರತಿಪಾದನೆಗಳಲ್ಲಿ ಎತ್ತಿದ ಕೈ. ಈಗ ಇಂತಹವುಗಳನ್ನು ಗ್ರಾಮೀಣ ಪ್ರದೇಶದ ವಿದ್ಯಾವಂತ ವರ್ಗವೂ ಅನುಕರಿಸತೊಡಗಿದೆ. ತಮ್ಮ ಸೌಕರ್ಯಗಳನ್ನಷ್ಟೇ ಬಯಸುವ, ತಮಗೆ ಮಾತ್ರ ಹಲವಾರು ಆಯ್ಕೆಗಳನ್ನು ನಿರೀಕ್ಷಿಸುವವರು ಸಹಜವಾಗಿ   ಹೇಗಾದರೂ ಆಗಲಿ ಅವುಗಳನ್ನೆಲ್ಲಾ ಒದಗಿಸುವ ಸರಕಾರ ಇದ್ದರೆ ಸಾಕೆಂದು ಸಾಮಾನ್ಯವಾಗಿ ಇವರುಗಳು ಬಯಸುತ್ತಿರುತ್ತಾರೆ. ಇವರಿಗೆ ಸರಕಾರಗಳು ಮಾಡುವ ಭ್ರಷ್ಟಾಚಾರ ಮಾತ್ರ ಬೃಹದಾಕಾರವಾಗಿ ಕಾಣಿಸತೊಡಗುತ್ತದೆ. ವಿದೇಶಿ ಸಾಲ ತಂದು ಅಭಿವೃಧ್ಧಿಗೆ ಬಳಸದೇ ಮುಳುಗಿಸುವ ಕೆಲಸಗಳನ್ನಷ್ಟೇ ಸರಕಾರಗಳು   ಮತ್ತದರ ಅಧಿಕಾರಿಗಳು ...

ಸಾಮಾಜಿಕ ಕಾರ್ಯಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ -Doddipalya Narasimha murthy. ..arrest

ಸಾಮಾಜಿಕ ಕಾರ್ಯಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಬಂಧನದ ಹಿಂದಿನ ಸಂದೇಶಗಳು! ಕರ್ನಾಟಕದಲ್ಲಿ   ದಶಕಗಟ್ಟಲೆ   ಹಿಂದಿನ ಮೊಕದ್ದಮೆಗಳ ನೆಪ ಹಿಡಿದು ಬಂಧಿಸಿಡುವ ಪ್ರಕ್ರಿಯೆ ಶುರುವಾಗಿದೆಯೇ ? ಈಗಿನ ವಾತಾವರಣ ಗಮನಿಸಿದಾಗ ಹಾಗೆ ಕಾಣುತ್ತಿದೆ. ಈಗ ಈ ಪ್ರಶ್ನೆ ಬರಲು ಕಾರಣವೂ ಇದೆ. ಸ್ವರಾಜ್ ಇಂಡಿಯಾದ ಕರ್ನಾಟಕದ ಹಾಲಿ ಪದಾಧಿಕಾರಿ, ನ್ಯಾಯ ಪಥ ಪತ್ರಿಕೆಯ ಸಂಪಾದಕ ಬಳಗದ ಸದಸ್ಯ , ಗೌರಿ ಮೀಡಿಯಾ ಟ್ರಸ್ಟ್ ನ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ದೊಡ್ಡಿ ಪಾಳ್ಯ ನರಸಿಂಹಮೂರ್ತಿಯವರನ್ನು ಇಪ್ಪತ್ತೈದು ವರ್ಷಗಳ ಹಿಂದಿನ ಪ್ರಕರಣಗಳಲ್ಲಿ ಬೇಕಾದವರೆಂದು ಅಕ್ಟೋಬರ್ 25 ರಂದು ಬಂಧಿಸಲಾಗಿದೆ. ನರಸಿಂಹಮೂರ್ತಿ ಇದುವರೆಗೂ ತಲೆಮರೆಸಿಕೊಂಡಿದ್ದರು ಅವರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವೊಂದನ್ನು ರಚಿಸಲಾಗಿತ್ತು.   ಆ ತಂಡ ಇವರನ್ನು ಬಹಳ ಸಾಹಸ ಪಟ್ಟು ಪತ್ತೆ ಹಚ್ಚಿ ಈಗ ಬಂಧಿಸಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ಹೇಳಲಾಗಿದೆ!. ರಾಜ್ಯ ಸರ್ಕಾರದ ಈ ಕ್ರಮ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದೆ. ರಾಜ್ಯಾದ್ಯಂತ ಈ ಬಂಧನ ವಿರೋಧಿಸಿ ಪ್ರತಿಭಟನೆಗಳು ನಡೆದಿವೆ. ಜಡವಾಗಿದ್ದ ಪತ್ರಕರ್ತ ಸಂಘಗಳು ಸ್ವಲ್ಪ ಮಟ್ಟಕ್ಕೆ ಜಡತ್ವದಿಂದ ಎದ್ದು ಕುಳಿತ ಹಾಗೆ ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಭಟನಾ ಅಭಿಯಾನಗಳು ನಡೆಯುತ್ತಿವೆ.   ನರಸಿಂಹಮೂರ್ತಿಯವರ ಮೇಲೆ ಹೊರಿಸಿರುವ ಆರೋಪಗಳಲ್ಲಿ ಶಸ್ತ್ರಾಸ್ತ್ರ ನಿಷೇಧ ಕಾಯ...

ಕೇರಳದಲ್ಲಿ ಎನ್ ಕೌಂಟರ್ , kerala encounter , fake.

ಕೇರಳದಲ್ಲಿ ಎನ್ ಕೌಂಟರ್ ಹೆಸರಿನ ನಾಲ್ವರ ಕಗ್ಗೊಲೆ ಕೇರಳದಲ್ಲಿ ಪೋಲೀಸ್ ಕೆಲವು ದಿನಗಳ ಹಿಂದೆ ಪೊಲೀಸ್ ಎನ್ಕೌಂಟರ್ ಒಂದು ನಡೆಯಿತು. ಅದರಲ್ಲಿ ನಾಲ್ವರು ಮಾವೋವಾದಿ ಕ್ರಾಂತಿಕಾರಿ ಹೋರಾಟಗಾರರು   ಮಡಿದ ಸುದ್ಧಿಯಾಯಿತು. ಮಡಿದವರಲ್ಲಿ ಇಬ್ಬರು ಕರ್ನಾಟಕದವರೆಂದು ಸುದ್ಧಿಯಾಗಿತ್ತು. ಆದರೆ ನಂತರ ತಮಿಳುನಾಡಿನವರೆಂದಾಯಿತು. ವಾಸ್ತವದಲ್ಲಿ ಇಬ್ಬರ ಮೃತದೇಹಗಳು ಯಾರದೆಂದು ಇನ್ನೂ ಪತ್ತೆಯಾಗಿಲ್ಲ.   ಎಡರಂಗ ಸರ್ಕಾರ ಮಾಡಿದ ಈ ಎನ್ಕೌಂಟರ್ ಅನ್ನು ಅಲ್ಲಿನ ಆಡಳಿತದ ಭಾಗವಾಗಿರುವ ಸಿ ಪಿ ಐ ಹಾಗೂ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಕೂಡಲೇ ಖಂಡಿಸಿದವು . ಕಾಂಗ್ರೆಸ್ ಇವೆಲ್ಲಾ ಸುಳ್ಳು ಎನ್ ಕೌಂಟರ್ ಗಳು , ಇದನ್ನು ಎಡರಂಗ ಸರಕಾರ ಮಾಡುತ್ತಿದೆಯೆಂದರೆ ಅದು ಎಷ್ಟು ಸರಿ . ಬಂಧಿಸಿ ಕಾನೂನು ವ್ಯಾಪ್ತಿಗೆ ತರಬೇಕಿತ್ತಲ್ಲವೇ ಎಂದು ಪ್ರಶ್ನಿಸಿದೆ . ಎಡ ರಂಗ ಸರ್ಕಾರ ಬಂದ ಮೇಲೆ ಏಳು ಜನರನ್ನು ಮಾವೋವಾದಿಗಳೆಂದು ಎನ್ಕೌಂಟರ್ ಮಾಡಿ ಕಗ್ಗೊಲೆ ನಡೆಸಿದೆ ಇದು ಖಂಡನೀಯ ಎಂದು ಅಲ್ಲಿನ ಕಾಂಗ್ರೆಸ್ ಹೇಳಿದೆ . ಇದಾದ ನಂತರದ ಬೆಳವಣಿಗೆಯಲ್ಲಿ ಸಿಪಿಐ (ಎಂ)ನ ಅಂಗಸಂಘಟನೆಯಾದ ಡಿ ವೈ ಎಫ್ ಐಗೆ ಸೇರಿದ ಇಬ್ಬರು ವಿದ್ಯಾರ್ಥಿಗಳನ್ನು ಮಾವೋವಾದಿಗಳೊಂದಿಗೆ ಕೈಗೂಡಿಸಿದ್ದಾರೆಂಬ ಆರೋಪದಡಿ ಬಂದಿಸಿ ಕರಾಳ ಯುಎಪಿಎ1967( ಕಾನೂನು ಬಾಹಿರ ಚಟುವಟಿಕೆಗಳ ಪ್ರತಿಬಂಧಕ ಕಾಯ್ದೆ 1967) ಹೊರಿಸಿ ಬಂಧಿಸಿದ...