'ಕೊರಗರು ತುಳುನಾಡಿನ ಮಾತೃ ಸಮುದಾಯ' ಎಂ ಬ ದಲಿತ ಕಾಳಜಿಯ ಮಹತ್ವದ ಕೃತಿ ಪತ್ರಕರ್ತ ಹಾಗೂ ಜನಪರ ಕಾರ್ಯಕರ್ತ ನವೀನ್ ಸೂರಿಂಜೆ ಕೊರಗರ ಕುರಿತಾದ ಒಂದು ಅವಶ್ಯಕವಾದ ಕೃತಿಯನ್ನು ಬ ರೆ ದಿದ್ದಾರೆ . ಇದನ್ನು ಕ್ರಿಯಾ ಪ್ರಕಾಶನ ಮುದ್ರಿಸಿ ಬಿಡುಗಡೆಗೊಳಿಸಿದ್ದಾರೆ . ಇದು ಕೊರಗ ಸಮುದಾಯದ ಹೃದಯ ವಿದ್ರಾವಕ ಬದುಕಿನ ಒಂದು ಚಿತ್ರಣವನ್ನು ಓದುಗರಿಗೆ ನೀಡುತ್ತದೆ . ನಾಗರಿಕವೆಂದು ಹೇಳಿಕೊಳ್ಳುತಿರುವ ಸಮಾಜ ಹಾಗೂ ಅದರ ಸರಕಾರಗಳು ಒಂ ದು ದುಡಿಮೆಗಾರ ಸಮುದಾಯವನ್ನು ಇಷ್ಟೊಂದು ಕಿರಾತಕವಾಗಿ ನಡೆಸಿಕೊಳ್ಳು ತ್ತಾ ಅಳಿವಿನಂಚಿಗೆ ದೂಡುತ್ತಾ ಬಂದಿದೆ ಎಂಬ ಕಠೋರ ಸತ್ಯವನ್ನು ಸ್ಪಷ್ಟವಾಗಿ ಮುಖಕ್ಕೆ ರಾಚುವಂತೆ ತೆರೆದಿಡುವ ಕೃತಿಯಿದು . ಇದು ಕಾಲ್ಪನಿಕ ಕೃತಿಯಲ್ಲ ಎನ್ನುವುದನ್ನು ಸ್ಪಷ್ಟವಾದ ಗ್ರಹಿಕೆಯೊಂದಿಗೆ ಓದಿಕೊಳ್ಳಬೇಕು . ಎಲ್ಲವನ್ನು ಆಧಾರಸಹಿತವಾಗಿ ವಿವರಿಸಿರುವ ಕೃತಿಯಿ ದು ಕೊರಗ ಸಮುದಾಯವನ್ನು ಹತ್ತಿರದಿಂದ ಕಂಡು ಸಾಕಷ್ಟು ಅದ್ಯಯನ ನಡೆಸಿ ಈ ಕೃತಿಯನ್ನು ನವೀನ್ ಸೂರಿಂಜೆ ರಚಿಸಿದ್ದಾರೆ. ೧೦೮ ಪುಟಗಳ ಈ ಕೃತಿಯನ್ನು ನಾವುಗಳು ನಮ್ಮ ಮನುಷ್ಯತ್ವ ಉಳಿಸಿಕೊಳ್ಳಲು ಓದಿ ಗ್ರಹಿಸಬೇಕಾದ ಅಗತ್ಯವಿದೆ. ಒಟ್ಟು ಹದಿಮೂರು ಅದ್ಯಾಯಗಳಿಂದ ಈ ಕೃತಿಯಲ್ಲಿ ಕೊರಗ ಸಮುದಾಯದ ಬಗ್ಗೆ , ಅವರನ್ನು ಈ ನಾಗರಿಕವೆಂದು ಹೇಳ...