Skip to main content

Posts

Showing posts from July, 2023

ಮಣಿಪುರದ ಇಂದಿನ ಪರಿಸ್ಥಿತಿಯ ಹಿಂದಿನ ಮುಖ್ಯ ಕಾರಣಗಳು#manipur#crisis#india

  ಮಣಿಪುರದ ಇಂದಿನ ಪರಿಸ್ಥಿತಿಯ ಹಿಂದಿನ ಮುಖ್ಯ ಕಾರಣಗಳು            - ನಂದಕುಮಾರ್   ಕುಂಬ್ರಿಉಬ್ಬು                                                                                                                          ಮಿಂಚಂಚೆ:  nandakumarnandana67@gmail.com      ಒಂದು ಕಾಲದಲ್ಲಿ ಕಾಂಗ್ಲೆಪಾಕ್ ಎಂಬ ಸ್ವತಂತ್ರ ಸಾಮ್ರಾಜ್ಯವಾಗಿದ್ದ ಇಂದಿನ ಮಣಿಪುರದ ಘಟನಾವಳಿಗಳು ಇತ್ತೀಚೆಗೆ ಮತ್ತೊಮ್ಮೆ ಇಡೀ ಜಗತ್ತಿನ ಗಮನವನ್ನು ದೊಡ್ಡಮಟ್ಟದಲ್ಲಿ ಸೆಳೆದಿವೆ. ಮಣಿಪುರ ರಾಜ್ಯದ ಪರಿಸ್ಥಿತಿಗೆ ಕಾರಣಗಳನ್ನು ಬಹಳ ಹಿಂದಿನಿಂದ ಮುಂದುವರೆಸಿಕೊಂಡು ಬರಲಾಗಿದೆ.   ಮೂವತ್ತಕ್ಕೂ ಹೆಚ್ಚಿನ ಬುಡಕಟ್ಟು ಜನಸಮುದಾಯಗಳಿರುವ ಪ್ರದೇಶ ಈಗಿನ ಮಣಿಪುರ ರಾಜ್ಯ.   1824-1826 ವರೆಗಿನ ಬ್ರಿಟಿಷ್ ಬರ್ಮಾ ಯುದ್ದದಲ್ಲಿ ಈಗಿನ ಇಂಡಿಯಾದ ಈಶಾನ...

ಕರ್ನಾಟಕದಲ್ಲಿ ಕನ್ನಡ ಭಾಷೆ ಬಹುಸಂಖ್ಯಾತ ಜನರಿಗೆ ಅನ್ನದ ಭಾಷೆ# kannada#karnataka#breadwinning langauge

                                   - ನಂದಕುಮಾರ್     ಕುಂಬ್ರಿಉಬ್ಬು ಜನಸಾಮಾನ್ಯರ ಬಳಕೆಯ ಪದಗಳನ್ನು ಭಾಷೆಯೊಂದು ಒಳಗೂಡಿಸಿಕೊಂಡಾಗ ಹಲವರು ಆರೋಪಿಸುವ ರೀತಿಯ ಶಬ್ಧ ಸಂಪತ್ತಿನ ಕೊರತೆಗಳು , ಪರ್ಯಾಯ ಪದಗಳ ಕೊರತೆಗಳು ಕಡಿಮೆಯಾಗುತ್ತಾ ಹೋಗುತ್ತವೆ . ಅಗ ಸಂಸ್ಕೃತವನ್ನೋ ಇಲ್ಲವೇ ಆಂಗ್ಲವನ್ನೋ ಎಲ್ಲದಕ್ಕೂ ಆಶ್ರಯಿಸಬೇಕಾದ ಅಗತ್ಯ ಕಡಿಮೆಯಾಗುತ್ತದೆ . ಪಟ್ಟಭದ್ರ ಹಿತಾಸಕ್ತಿಗಳ ಭಾಷಾ ಹೇರಿಕೆಗಳು ಹಾಗೂ ಒಳತೂರಿಸುವಿಕೆಗೂ ಅವಕಾಶ ಕಡಿಮೆಯಾಗುತ್ತದೆ ..   ವಿದ್ಯಾವಂತರೆನಿಸಿದವರಲ್ಲಿ ಹಲವರು ಅರೋಪಿಸುವ ಕನ್ನಡ ಅನ್ನದ ಭಾಷೆಯಲ್ಲ . ಆಂಗ್ಲ ಅನ್ನದ ಭಾಷೆ , ಇಲ್ಲವೇ ಹಿಂದಿ ಅನ್ನದ ಭಾಷೆ ಎನ್ನುವ ಮಾತುಗಳು ಎಷ್ಟು ಸುಳ್ಳು ಎನ್ನುವುದನ್ನು ಬಹುಸಂಖ್ಯಾತ ಜನರು ಅವರವರ ಭಾಷೆಗಳಲ್ಲೇ ದೈನಂದಿನ ವ್ಯವಹಾರ , ವ್ಯಾಪಾರ , ಒಡನಾಟಗಳನ್ನು ; ಕಲೆ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು , ಸಂವಹನವನ್ನು ಮಾಡುತ್ತಿದ್ದಾರೆ ಎನ್ನುವುದನ್ನು ಅರಿತಾಗ ಮಾತ್ರ ಅರ್ಥವಾಗುತ್ತವೆ .   ಕರ್ನಾಟಕದಲ್ಲಿ ಕನ್ನಡ ಭಾಷೆ ಬಹುಸಂಖ್ಯಾತ ಜನರಿಗೆ ಅನ್ನದ ಭಾಷೆಯಾಗಿದೆ . ಯಾಕೆಂದರೆ ರಾಜ್ಯದ ಬಹುಪಾಲು ಜನರು ಕನ್ನಡದ ಮೂಲಕವೇ ಅನ್ನವನ್...