Skip to main content

Posts

Showing posts from February, 2022

ರಷ್ಯಾ ಉಕ್ರೈನ್ ಯುದ್ಧ#ಸಾಮ್ರಾಜ್ಯಶಾಹಿಗಳ ಪೈಪೋಟಿ#Russia#Ukraine#America#imperialism

  ರಷ್ಯಾ ಉಕ್ರೈನ್ ಯುದ್ಧ… ಜಾಗತಿಕ ಲೂಟಿಗಾಗಿನ ಸಾಮ್ರಾಜ್ಯಶಾಹಿಗಳ ಪೈಪೋಟಿಯ ಪರಿಣಾಮ..           - ನಂದಕುಮಾರ್ ಕೆ. ಎನ್. ಕುಂಬ್ರಿಉಬ್ಬು                                                                    nandakumarnandana67@gmail.com       ಬಹಳ ಕಾಲದಿಂದ ಗರಿಗಟ್ಟಿಸುತ್ತಾ ಬಂದ ಉಕ್ರೈನ್ ಮತ್ತು ರಷ್ಯಾ ಬಿಕ್ಕಟ್ಟು ಈಗ ಯುದ್ಧದ ಹಂತಕ್ಕೆ ತಲುಪಿಸಲಾಗಿದೆ. ಗೊರ್ಬಚೇವ್ ಕಾಲದ ಬಂಡವಾಳಶಾಹಿ ನಡೆಗಳ ಅಂತಿಮ ಪರಿಣಾಮವಾಗಿ ಸೋವಿಯತ್ ಗಣರಾಜ್ಯ ಪತನಗೊಂಡು ಅದರ ಭಾಗವಾಗಿದ್ದ ಹಲವು ಗಣರಾಜ್ಯಗಳು ಪ್ರತ್ಯೇಕ ರಾಷ್ಟ್ರಗಳಾಗಿ ಸ್ವಾತಂತ್ರ್ಯಗೊಂಡವು. ಹಿಂದಿನ ಸಮಾಜವಾದಿ ಸೋವಿಯತ್ ಒಕ್ಕೂಟದ ಭಾಗವಾಗಿದ್ದಾಗಿನಿಂದಲೂ ಆಯಾ ಗಣರಾಜ್ಯಗಳು ಪ್ರತ್ಯೇಕ ಸಂಸತ್ತು, ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಸರ್ಕಾರಗಳನ್ನು ಹೊಂದಿದ್ದವಲ್ಲದೇ ಬಯಸಿದಲ್ಲಿ ಪ್ರತ್ಯೇಕಗೊಳ್ಳುವ ಹಕ್ಕು ಸೇರಿದಂತೆ ಸ್ವಯಂ ನಿರ್ಣಯದ ಹಕ್ಕನ್ನು ಮೊದಲಿನಿಂದಲೂ ಹೊಂದಿದ್ದವು. ಸೋವಿಯತ್ ಒಕ್ಕೂಟದ ಸರ್ಕಾರ ವಿದೇಶಾಂಗ ವ್ಯವಹಾರ, ರಕ್ಷಣೆಯಂತಹ ಎಲ್ಲಾ ಗಣರಾಜ್ಯಗಳ...

ಸಿಡಿದೆದ್ದು ನಿಲ್ಲತೊಡಗಿರುವ ದಲಿತದಮನಿತ ಜನಸಮೂಹ#dalith uprising#bengaluru rally#raichur#ambedkar photo row#judge

ಸಿಡಿದೆದ್ದು ನಿಲ್ಲತೊಡಗಿರುವ ದಲಿತದಮನಿತ ಜನಸಮೂಹ… ಬೆಂಗಳೂರಿನಲ್ಲಿ ಮಹಾ ಪ್ರತಿಭಟನೆ …     -ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು                                                                        ಮಿಂಚಂಚೆ:  nandakumarnandana67@gmail.com   ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಚಿತ್ರವನ್ನು ಗಣರಾಜ್ಯೋತ್ಸವ ಆಚರಣೆಯ ಸ್ಥಳದಿಂದ ತೆಗೆಸಿ ಅವಮಾನಿಸಿದ್ದನ್ನು, ದಲಿತ ಸಮೂಹದ ಮೇಲೆ ನಿರಂತರವಾಗಿ ಹೆಚ್ಚುತ್ತಾ ಹೋಗುತ್ತಿರುವ ಶೋಷಣೆ ದೌರ್ಜನ್ಯ, ಅತ್ಯಾಚಾರಗಳನ್ನು ಪ್ರತಿಭಟಿಸಿ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿವೆ. ಬೀದರ ಜಿಲ್ಲೆಯ ಹುಮ್ನಾಬಾದಿನಲ್ಲಿ ಅಲ್ಲಿನ ತಹಶೀಲ್ದಾರ ಪ್ರತಿಭಟನೆಯಲ್ಲಿದ್ದ ದಲಿತಸಮೂಹದ ಹಕ್ಕೊತ್ತಾಯಪತ್ರ ಪಡೆಯಲು ಸತಾಯಿಸಿ ಅಪಮಾನಿಸಿದ್ದರಿಂದಾಗಿ ಕೆರಳಿದ ದಲಿತಸಮೂಹ ತಹಶೀಲ್ದಾರ್ ಕೊಠಡಿಗೆ ನುಗ್ಗಿ, ಮಾತಿನ ಚಕಮಕಿ ನಡೆಸಿ, ಹೊರಗಡೆ ಕರೆದುಕೊಂಡು ಬಂದು, ತಮ್ಮ ಹಕ್ಕೊತ್ತಾಯ ಪತ್ರ ಪಡೆದುಕೊಳ್ಳುವಂತೆ ಮಾಡಿದ ಘಟನೆಯೂ ನಡೆದಿದೆ. ಅದೇ ಕಾರಣ ಹಿಡಿದು ಪ್ರತಿಭಟ...

ಭೂಗೋಳವನ್ನೇ ಬರಡಾಗಿಸಿ ಸಕಲ ಜೀವಜಾಲಗಳ ವಿನಾಶ#ಭಾರಿ ಕಾರ್ಪೋರೇಟು# pesticides#insecticides#global destroyer# global corporations

  ಭೂಗೋಳವನ್ನೇ ಬರಡಾಗಿಸಿ ಸಕಲ ಜೀವಜಾಲಗಳ  ವಿನಾಶಮಾಡುತ್ತಿರುವ ಜಾಗತಿಕ ಭಾರಿ ಕಾರ್ಪೋರೇಟುಗಳು !                                                                                       -ನಂದಕುಮಾರ್ ಕೆ. ಎನ್. ಕುಂಬ್ರಿ ಉಬ್ಬು ಕ್ರಿಮಿನಾಶಕ, ಕೀಟನಾಶಕ, ಶಿಲೀಂದ್ರನಾಶಕ, ಕಳೆನಾಶಕ ಮೊದಲಾದ ವಿಷಕಾರಕಗಳ ಅವೈಜ್ಞಾನಿಕ ಬಳಕೆ ಮತ್ತು ವ್ಯಾಪಕತೆಯಿಂದಾಗಿ ಮಣ್ಣಿನ ಆರೋಗ್ಯಕ್ಕೆ ಹಾಗೂ ಜೀವಜಾಲಗಳಿಗೆ ಅಗತ್ಯವಾದ ಬ್ಯಾಕ್ಟೀರಿಯಾಗಳ ನಾಶವಾಗುತ್ತಾ ಸಾಗುತ್ತಿದೆ.   ಕೊಳೆಸಿ ಮಣ್ಣಿನಲ್ಲಿ ಬೆರೆಸುವ ಗುಣಗಳಿರುವ ಕೀಟಗಳು, ಹುಳಗಳು, ಬ್ಯಾಕ್ಟೀರಿಯಾಗಳು ಮೊದಲಾದವುಗಳು ಈ ವಿಷಕಾರಿಗಳಿಂದಾಗಿ ನಾಶವಾಗುತ್ತಾ ಸಾಗುತ್ತಿವೆ. ಜೊತೆಗೆ ಸಸ್ಯಗಳು ಹೂ ಬಿಟ್ಟು ಕಾಯಿ ಬೀಜ ಕಟ್ಟಲು ಅಗತ್ಯವಾಗಿರುವ ನೊಣಗಳು, ಕೀಟಗಳು, ಪ್ರಾಣಿಗಳು ನಾಶವಾಗುತ್ತಾ ಸಾಗಿವೆ. ಇದರಿಂದಾಗಿ ಗಿಡಮರ ಬಳ್ಳಿಗಳ ಫಲವಂತಿಕೆ ಕಡಿಮೆಯಾಗುತ್ತಾ ಸಾಗುತ್ತಿದೆ. ರೈತರ ಮಿತ್ರವಾದ ಕಪ್ಪೆಗಳು, ಮೀನುಗಳು, ಏಡಿಗಳು, ಸಿಗಡಿಗಳು, ಎರೆಹುಳಗಳು ಇನ್...

ತಲೆಬಟ್ಟೆ ತೊಟ್ಟಿರುವ ನೆಪದಲ್ಲಿ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವುದು ಜನಾಂಗೀಯ ನಿಂದನೆಗೆ ಸಮನಾದುದು# headcloth#hijab issue# educational institution# karnataka# racial#

  ತಲೆಬಟ್ಟೆ ತೊಟ್ಟಿರುವ ನೆಪದಲ್ಲಿ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವುದು ಜನಾಂಗೀಯ ನಿಂದನೆಗೆ ಸಮನಾದುದು.    - - ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು ಕರ್ನಾಟಕ ಇಂದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿ ಮಾಡುತ್ತಿದೆ. ಅದು ಹೆಮ್ಮೆ ಪಡುವಂತಹ ಕಾರಣಕ್ಕಾಗಿಯೇನೂ ಅಲ್ಲ. ಬದಲಿಗೆ ತಲೆವಸ್ತ್ರದ ಹೆಸರಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನು ಕಾಲೇಜುಗಳಿಂದ ಹೊರಗಡೆ ಹಾಕುತ್ತಿರುವ ಕಾರಣಕ್ಕಾಗಿ. ಬಹುಶಹ ವಸ್ತ್ರದ ಕಾರಣ ಹಿಡಿದು ಈ ಮಟ್ಟದಲ್ಲಿ ಕಾಲೇಜುಗಳ ಅದರಲ್ಲೂ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿನಿಯರನ್ನು ಸಾರಾಸಗಟಾಗಿ ಕಾಲೇಜಿನಿಂದಲೇ ಹೊರಗಡೆ ಹಾಕಿರುವ ಪ್ರಕರಣಗಳು ಅಪರೂಪವಾದುದು. ಇದು ಕರ್ನಾಟಕದಲ್ಲಿ ನೆಡೆದಿದೆ ಎಂದರೆ ಮತ್ತೂ ಅಪರೂಪವಾದುದು. ಕರ್ನಾಟಕ ರಾಜ್ಯ ದೇಶದಲ್ಲೇ ಏಕೋಪಾಧ್ಯಾಯ ಶಾಲೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಆರನೇ ಸ್ಥಾನದಲ್ಲಿದೆ. ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ನಿಗದಿತ ಅಧ್ಯಾಪಕರುಗಳ ಕೊರತೆಯ ಸಮಸ್ಯೆ ನಿರಂತರವಾಗಿ ಸಾಗಿದೆ. ಅತಿಥಿ ಉಪನ್ಯಾಸಕರು ಎಂಬ ಅಪಕ್ವ ಹಾಗೂ ಅವೈಜ್ಞಾನಿಕ ವ್ಯವಸ್ಥೆ ನಿರಂತರವಾಗಿ ಸಾಗುತ್ತಾ ಬರುತ್ತಿದೆ. ಅತಿಥಿ ಉಪನ್ಯಾಸಕರುಗಳಿಗೆ ಸೂಕ್ತ ಸಂಬಳ ಹಾಗೂ ಉದ್ಯೋಗ ಭದ್ರತೆ ಇಲ್ಲದೇ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.   ಹತ್ತಾರು ವರುಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರಲ್ಲಿ ಹಲವರು ಹತಾಶ ಸ್ಥಿತಿಗೆ ಜಾರಿದ್ದಾರ...