Skip to main content

Posts

Showing posts from May, 2021

ಮಮತಾ ಬ್ಯಾನೆರ್ಜಿ ಹಿಂದುತ್ವಫ್ಯಾಸಿಸಂ ನ ವಿರೋಧಿಯೇ#mamatha banerji# hindutva# fascism#westbengal#

  ಮಮತಾ ಬ್ಯಾನೆರ್ಜಿ ಹಿಂದುತ್ವ ಫ್ಯಾಸಿಸಂ ನ ವಿರೋಧಿಯೇ.. ಜಾತ್ಯಾತೀತ ಹಾಗೂ ಪ್ರಜಾತಾಂತ್ರಿಕ ನಾಯಕಿಯೇ...!!! ????      -ನಂದಕುಮಾರ್ ಕೆ ಎನ್. ಕುಂಬ್ರಿ ಉಬ್ಬು. ದಕ್ಷಿಣ ಇಂಡಿಯಾದ ತಮಿಳುನಾಡು, ಕೇರಳ, ಪುದುಚೇರಿ, ಈಶಾನ್ಯ ಇಂಡಿಯಾದ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ನ ವಿಧಾನ ಸಭಾ ಚುನಾವಣೆಗಳು ಮುಗಿದು   ಕೇರಳ ಹೊರತುಪಡಿಸಿದಂತೆ ಎಲ್ಲಾ ರಾಜ್ಯಗಳಲ್ಲಿಈಗ ಹೊಸ ಸರ್ಕಾರಗಳು ರಚನೆಯಾಗಿವೆ. ಈ ಎಲ್ಲಾ ಚುನಾವಣೆಗಳಲ್ಲಿ ಸಂಘಪರಿವಾರದ ಬಿಜೆಪಿ ಪುದುಚೇರಿ ಹಾಗೂ ಅಸ್ಸಾಂನಲ್ಲಿ ಮಾತ್ರ ಅಧಿಕಾರವನ್ನು ಸ್ಥಾಪಿಸಿಕೊಂಡಿದೆ. ಪುದುಚೇರಿ ಒಕ್ಕೂಟ ಸರ್ಕಾರದ ಆಡಳಿತ ಪ್ರದೇಶವಾಗಿರುವುದರಿಂದ ಅಲ್ಲಿನ ಸರ್ಕಾರಕ್ಕೆ ವಿಶೇಷವೇನೂ ಇಲ್ಲ. ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿಯೇ ಹೆಚ್ಚೂ ಕಮ್ಮಿ ಅಧಿಕಾರ ನಡೆಸಿದ್ದು ಗುಟ್ಟೇನೂ ಅಲ್ಲ. ಉಳಿದಂತೆ ಅಸ್ಸಾಂನಲ್ಲಿ ಬಿಜೆಪಿಗೆ ಬಹುಮತವಿಲ್ಲದಿದ್ದರೂ ಇತರ ಶಕ್ತಿಗಳೊಂದಿಗೆ ಸಂಯುಕ್ತರಂಗ ರಚಿಸಿಕೊಂಡು ಅಧಿಕಾರ ಹಿಡಿದುಕೊಂಡಿದೆ. ಉಳಿದಂತೆ ಪಶ್ಚಿಮ ಬಂಗಾಳದಲ್ಲಿ ತನ್ನ ವಿಧಾನ ಸಭಾ ಸದಸ್ಯಬಲವನ್ನು ಹಾಗೇನೆ ಮತ ಗಳಿಕೆಯ ಪ್ರಮಾಣವನ್ನು ಕಳೆದಬಾರಿಗಿಂತ ಹೆಚ್ಚಿಸಿಕೊಂಡಿದ್ದರೂ ಅಧಿಕಾರ ಹಿಡಿಯಲಾಗಲಿಲ್ಲ. ಇನ್ನು ತಮಿಳುನಾಡು ಹಾಗೂ ಕೇರಳದಲ್ಲಿ ಎಷ್ಟೆಲ್ಲಾ ತಿಣುಕಾಡಿದರೂ ಬಿಜೆಪಿಯ ಸಾಧನೆಯೇನೂ ಹೇಳಿಕೊಳ್ಳುವಂತೆ ಇಲ್ಲ. ಕೇರಳದಲ್ಲಿ ಅಯ್ಯಪ್ಪನ...

ಕೋವಿದ್ 19 ರ ಮಧ್ಯೆ ಇಸ್ರೇಲಿ ಆಕ್ರಮಣಗಳಲ್ಲಿ ನಲುಗಿರುವ ಪ್ಯಾಲೆಸ್ತೇನಿಯರು# israle#palestine#conflict#covid 19

  ಕೋವಿದ್ 19 ರ ಮಧ್ಯೆ ಇಸ್ರೇಲಿ ಆಕ್ರಮಣಗಳಲ್ಲಿ ನಲುಗಿರುವ ಪ್ಯಾಲೆಸ್ತೇನಿಯರು ಜಾಗತಿಕವಾಗಿ ಕೊವಿದ್ 19ರ ಬಿಕ್ಕಟ್ಟು ಆರಂಭಿಸಲ್ಪಟ್ಟು ಈಗ ಒಂದೂವರೆ ವರುಷಗಳಾಗುತ್ತಿದೆ. ಇದೇ ಸಂಧರ್ಭದಲ್ಲಿ 2008ರಿಂದ ಆರಂಭವಾದ ಜಾಗತೀಕರಣೋತ್ತರ ಜಾಗತಿಕ ಆರ್ಥಿಕ ಬಿಕ್ಕಟ್ಟುಗಳಿಂದಾಗಿ, ಮುಂದುವರೆದ ರಾಷ್ಟ್ರಗಳ ಜಿಡಿಪಿ ಗಳು ನಕಾರಾತ್ಮಕ ಬೆಳವಣಿಗೆಗಳನ್ನು ಕಾಣುತ್ತಾ ಬರುತ್ತಿರುವುದು ಈಗಲೂ ಮುಂದುವರೆದಿವೆ. ಅದೇ ವೇಳೆಯಲ್ಲಿ ಜಾಗತಿಕವಾಗಿ ಕೆಲವೇ ಬಿಲಿಯನೇರುಗಳ ಆಸ್ತಿಗಳು ಬಿಲಿಯನ್ ಗಟ್ಟಲೆ ಏರಿಕೆಯನ್ನು ಕಾಣುತ್ತಾ ಬರುತ್ತಿರುವುದನ್ನು ಆಕ್ಸಫಾಮ್ ಇನ್ನಿತರ ವರದಿಗಳು ಆಗಾಗ ಹೇಳುತ್ತಲೇ ಬರುತ್ತಿವೆ. ಪ್ರಸ್ತುತ ಮುಂದುವರೆದ ರಾಷ್ಟ್ರಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದು ಸಾವುಗಳು ಕಡಿಮೆಯಾಗಿ ಸಾರ್ವತ್ರಿಕ ಚುಚ್ಚು ಮದ್ದು ಯೋಜನೆ ಜಾರಿಗೊಳಿಸಿವೆ. ಅದರ ಬೆನ್ನಲ್ಲೇ ಚುಚ್ಚುಮದ್ದು ಉತ್ಪಾದನಾ ಕಂಪನಿಗಳು ಮತ್ತಷ್ಟು ಬಿಲಿಯನ್ ಗಳ ಆಸ್ತಿಗಳನ್ನು ಪೇರಿಸಿಕೊಳ್ಳತೊಡಗಿರುವ ವರದಿಗಳು ಬರುತ್ತಿವೆ. ಅಮೇರಿಕದಂತಹ ರಾಷ್ಟ್ರಗಳು ಚುಚ್ಚುಮದ್ದು ತೆಗೆದುಕೊಂಡವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಘೋಷಿಸತೊಡಗಿವೆ. ಇಂಡಿಯಾದಲ್ಲಿ ಮಾಸ್ಕ್ ಸಾರ್ವತ್ರಿಕವಾಗಿ ಕಡ್ಡಾಯಗೊಳಿಸಿ ಲಾಕ್ ಡೌನ್ ಗಳನ್ನು ಹೇರುತ್ತಾ ವಿಸ್ತರಿಸುತ್ತಾ ಬರಲಾಗುತ್ತಿದೆ. ಅವುಗಳ ಉಲ್ಲಂಘನೆಯ ಹೆಸರಿನಲ್ಲಿ ಲಾಠಿಚಾರ್ಜ್ ಗಳನ್ನು ದೂರು ಪ್ರಕರಣಗಳನ್ನು ದಾಖಲಿಸುತ್ತಾ, ಬಾರಿ ಮೊತ್ತದ ದಂಡಗಳ...

ಕೋವಿಶೀಲ್ಡ್ ಉತ್ಪಾದನೆ ಇಂಡಿಯಾದ ಪೂನಾವಾಲರದಾದರೆ#ಲಾಭ ಯಾಕೆ ಗ್ರೇಟ್ ಬ್ರಿಟನ್ ಗೆ#poonavala#kovishield# Great Britain

    ಕೊವಿಶೀಲ್ಡ್  ಉತ್ಪಾದನೆ ಇಂಡಿಯಾದ  ಪೂನಾವಾಲರದಾದರೆ ಲಾಭ ಯಾಕೆ ಗ್ರೇಟ್ ಬ್ರಿಟನ್ ಗೆ ಹೋಗುತ್ತಿದೆ ?!                          - -ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು ಇಂಡಿಯಾ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಅದರ್ ಪೂನಾವಾಲ ಇತ್ತೀಚೆಗೆ ಬ್ರಿಟನ್ ದೇಶದ ಪತ್ರಿಕೆ ‘ಲಂಡನ್ ಟೈಮ್ಸ್ ‘ಗೆ ಒಂದು ಸಂದರ್ಶನ ನೀಡಿ “ಇಂಡಿಯಾದ ಪ್ರಭಾವಿ ಹಾಗೂ ಅಧಿಕಾರ ವಲಯಗಳಿಂದ ನನ್ನ ಮೇಲೇ ಅತೀವ ಒತ್ತಡಗಳು ಬಂದು ಅದನ್ನು ತಾಳಲಾಗದೇ ನಾನು ಬ್ರಿಟನ್ ಗೆ ಬಂದಿರುವೆ” ” ‘ಕೋವಿದ್ 19’ ಚುಚ್ಚುಮದ್ದು ಸರಬರಾಜಿಗೆ ಒತ್ತಡ ಅತೀವವಾಗಿ ಪ್ರಾಣ ಭಯದ ಮಟ್ಟ ತಲುಪಿತು” ಚುಚ್ಚು ಮದ್ದು ಉತ್ಪಾದನೆ ಅಧಿಕಗೊಳಿಸಲು ಬೇಕಾದ ಅಧೀಕೃತ ಬೇಡಿಕೆಯನ್ನು ಯಾವುದೇ ವಲಯ ತಮ್ಮ ಕಂಪನಿಗೆ ನೀಡಿರಲಿಲ್ಲ” ಇತ್ಯಾದಿ ಮಾತುಗಳು ಒಂದಷ್ಟು ಸುದ್ದಿ ಮಾಡಿತ್ತು.   ಅದರ ನಂತರ ಕೆಲದಿನಗಳ ಹಿಂದೆ ಪೂನಾವಾಲ ಇಂಗ್ಲೆಂಡಿನಲ್ಲಿ 240 ದಶಲಕ್ಷ ಪೌಂಡುಗಳ (ಒಂದು ಗ್ರೇಟ್ ಬ್ರಿಟನ್ ಪೌಂಡ್ ನಮ್ಮ ನೂರ ಎರಡು ರೂಪಾಯಿ ಮೂವತ್ತೇಳು ಪೈಸೆಗೆ ಸಮ) ಬಂಡವಾಳವನ್ನು ಹೂಡಿ ಚುಚ್ಚು ಮದ್ದು ಉತ್ಪಾದನೆ, ಅದರ ಸಂಶೋಧನೆ, ಮಾರಾಟಗಳಿಗೆ ತೊಡಗಿಸುವುದಾಗಿ ಹೇಳಿಕೆ ಕೊಟ್ಟಿದ್ದರು. ಇದರಿಂದಾಗಿ  ಕೋವಿಶೀಲ್ಡ್  ಚುಚ್ಚುಮದ್ದು ಮೊದಲು ಬ್ರಿಟನ್ನಿನ ಅವಶ್ಯಕತ...

ಸಂಚಲನ ಮೂಡಿಸಿ ಮುನ್ನೆಡೆಯುತ್ತಿರುವ ರೈತಹೋರಾಟ#ಮೈಕೊಡವಿ ನಿಲ್ಲದ ಮದ್ಯಮವರ್ಗ# Peasant sruggle#Delhi#Middle class#India

  ಸಂಚಲನ ಮೂಡಿಸಿ ಮುನ್ನೆಡೆಯುತ್ತಿರುವ ರೈತಹೋರಾಟ… ಮುಳುಗಿಸಲ್ಪಡುತ್ತಿದ್ದರೂ ಮೈಕೊಡವಿ ನಿಲ್ಲದ ಮದ್ಯಮವರ್ಗ.. ದೇಶದಲ್ಲಿ ರಾಜಧಾನಿ ದೆಹಲಿ ಹಿಂದೆಂದೂ ಕಾಣದಂತಹ ವಿದ್ಯಮಾನದ ಮದ್ಯೆ ಇರಲು ಶುರುವಾಗಿ ಹಲವು ತಿಂಗಳುಗಳೇ ಉರುಳಿವೆ. ಮಹಾನಗರದ ಹೊರವಲಯ ಲಕ್ಷಾಂತರ ರೈತಾಪಿಗಳಿಂದ ತುಂಬಿ ತುಳುಕುತ್ತಾ ಮುತ್ತಿಗೆಗೆ ಒಳಗಾಗಿದೆ. ದೇಶದಲ್ಲಿ ನಡೆಯುತ್ತಿರುವ   ಅಭೂತ ಪೂರ್ವ ರೈತ ಹೋರಾಟ ನೂರೈವತ್ತು ದಿನಗಳನ್ನು ದಾಟಿ ಮುಂದೆ ಸಾಗುತ್ತಿದೆ. ದೇಶವಿಡೀ ಭಾರಿ ಸಂಚಲನವನ್ನು ಹುಟ್ಟುಹಾಕಿ ಮುನ್ನೆಡೆಯುತ್ತಿರುವ ಈ ಹೋರಾಟ ಜಾಗತಿಕವಾಗಿ ಭಾರಿ ಗಮನ ಸೆಳೆದಿದೆ. ಸುಮಾರು ನಾನೂರಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಚಳಿ ಬಿಸಿಲುಗಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಇಂಡಿಯಾದ ರೈತಾಪಿ ಜನಸಮೂಹವನ್ನು ಬಡಿದೆಬ್ಬಿಸುವಲ್ಲಿ ಈ ಹೋರಾಟದ ಯಶಸ್ಸನ್ನು ಗುರುತಿಸಬೇಕಾದುದು ಅಗತ್ಯವಾಗಿದೆ. ಅದರಲ್ಲೂ ಆಳುವ ವ್ಯವಸ್ಥೆಯ ಎಲ್ಲಾ ದಮನ ಷಡ್ಯಂತ್ರಗಳ ನಡುವೆ ಜಾತಿ ಮತಗಳನ್ನು ಮೀರಿ ದಲಿತ ಮುಸ್ಲಿಂ ಜನಸಮೂಹವನ್ನು, ಜಾಟ್ ಜನಸಮೂಹವನ್ನು, ಮಹಿಳೆಯರನ್ನು, ಭೂಹೀನ ರೈತರನ್ನು, ಬಡ ರೈತರನ್ನು ಸಾಮೂಹಿಕತೆಯಡಿ ಜೊತೆಗೂಡಿಸಿಕೊಂಡು ಹೋಗುತ್ತಿರುವಂತಹ ಮಹತ್ವದ ಸಾಧನೆ ಮಾಡಿರುವುದು ಈ ಹೋರಾಟದ ಒಂದು ದೊಡ್ಡ ಸಾಧನೆಯಾಗಿದೆ. ಈ ಹೋರಾಟ ಭಿನ್ನ ಭಿನ್ನ ಸೈದ್ಧಾಂತಿಕ ವಿಚಾರಗಳಿರುವ ದೇಶದ ನಾನೂರಕ್ಕಿಂತಲೂ ಹೆಚ್ಚಿನ ಸಂಘಟನೆಗಳನ್ನು ಒಗ್ಗೂಡಿಸಿ ಸಂಯುಕ್ತ ಕಿಸಾನ್ ಮಂಚ್ ಎ...