Skip to main content

Posts

Showing posts from August, 2020

ಒಡೆಯರ ಆಡಳಿತದಲ್ಲಿ ಮಹಿಳೆ#ಪುರುಷಾಧಿಪತ್ಯ#vodayar rule#women#patriarchy#opression

  ಒಡೆಯರ ಆಡಳಿತದಲ್ಲಿ ಮಹಿಳೆಯರ ಮೇಲಿನ ಪುರುಷಾಧಿಪತ್ಯದ ದಬ್ಬಾಳಿಕೆಯ ಹೆಚ್ಚಳ ಆಂಗ್ಲ ಮೂಲ: ಮೇಕಿಂಗ್ ಹಿಸ್ಟರಿ ಕರ್ನಾಟಕಾಸ್ ಪೀಪಲ್ ಆಂಡ್ ದೆಯರ್ ಪಾಸ್ಟ್ - ಸಂಪುಟ 2                              -ಸಾಕಿ ಕನ್ನಡ ರೂಪಾಂತರ- ಡಾ ಆಶೋಕ್ ಕೆ ಆರ್. -ನಂದಕುಮಾರ್ ಕೆ ಎನ್ ಕುಂಬ್ರಿ ಉಬ್ಬು   ಟಿಪ್ಪುವಿನ ನಿಯಮಗಳು ವೇಶ್ಯಾವಾಟಿಕೆ ಮತ್ತು ಮಹಿಳೆಯರ ಮಾರಾಟವನ್ನು ನಿಷೇಧಿಸಿತ್ತು. ಚಾಮುಂಡಿ ದೇವಸ್ಥಾನಕ್ಕೆ ನರಹತ್ಯೆಯ ನೆಪದಲ್ಲಿ ಕನ್ಯೆಯರ ಜೀವಹರಣವಾಗುವುದನ್ನು ತಪ್ಪಿಸಲು ಕಠಿಣ ಕ್ರಮಗಳನ್ನು ಆತ ತೆಗೆದುಕೊಂಡಿದ್ದ ಎನ್ನುವ ವರದಿಗಳೂ ಇವೆ. 204 ವಸಾಹತುಶಾಹಿ ಮತ್ತವರ ಕೈಗೊಂಬೆ ಸರಕಾರ ಅಧಿಕಾರಕ್ಕೆ ಬರುವುದರೊಂದಿಗೆ ಇಂತಹ ಹೇಯ ಆಚರಣೆಗಳು ಮತ್ತೆ ಪ್ರಾರಂಭವಾದವು , ಮಹಿಳೆಯರಿಗೆ ವಿಪರೀತದ ಉಪದ್ರವ ಕೊಡುವ ಕಾಲವಾಯಿತು ಇದು. ಕೈಗೊಂಬೆ ಸರಕಾರ ಮಹಿಳೆಯರನ್ನು ಶೋಷಿಸಿದ ಬಗ್ಗೆ ಸೆಬಾಸ್ಟಿಯನ್ ಜೋಸೆಫ್ ಹೇಳುತ್ತಾರೆ: “ಮಹಿಳೆಯರ ಸ್ಥಾನಮಾನ ತುಂಬ ಚರ್ಚೆಗೆ ಒಳಗಾಗಿದೆ , ಆದರೆ , ಕರ್ನಾಟಕದ ಇತಿಹಾಸದ ಶೋಧದಲ್ಲಿ ತುಂಬ ಕಡಿಮೆ ಸ್ಥಳವನ್ನು ಪಡೆದಿದೆ. ಪರೋಕ್ಷವಾಗಿಯಾದರೂ ಈ ವಿಷಯದ ಬಗ್ಗೆ ಮಾತನಾಡಿರುವ ಪ್ರತಿಯೊಬ್ಬ ವಿದ್ವಾಂಸರೂ ನವಯುಗ ಪೂರ್ವ...

ಮೈಸೂರು ಒಡೆಯರ್# ಜಾತಿ ದೌರ್ಜನ್ಯದ ಹೆಚ್ಚಳ#ಬ್ರಾಹ್ಮಣ್ಯೀಕರಣ#vodayar#caste attrocities#brahmanisation

     ಬ್ರಿಟೀಷರಿಗೆ ಮೊದಲೇ ಶರಣಾಗಿದ್ದು,  ಟಿಪ್ಪು ಸುಲ್ತಾನನ ಸಾವಿನ ನಂತರ,  ಗುಲಾಮಗಿರಿ ಮಾಡಿ ಅಧಿಕಾರಕ್ಕೆ ಬಂದ ಮೈಸೂರು ಒಡೆಯರ್ ಗಳ ಕಾಲದಲ್ಲಿ ಆದ ಜಾತಿ ದೌರ್ಜನ್ಯಗಳ ಹಾಗೂ ಊಳಿಗಮಾನ್ಯ ಬ್ರಾಹ್ಮಣ್ಯೀಕರಣದ ಹೆಚ್ಚಳದ ಕುರಿತು ಒಂದಷ್ಟು...... ಆಂಗ್ಲ ಮೂಲ: ಮೇಕಿಂಗ್ ಹಿಸ್ಟರಿ ಕರ್ನಾಟಕಾಸ್ ಪೀಪಲ್ ಅಂಡ್ ದೆಯರ್ ಪಾಸ್ಟ್ ಸಂಪುಟ 2 -ಸಾಕಿ ಪುಟ 90 ರಿಂದ 94 ಕನ್ನಡ ರೂಪಾಂತರ- ಡಾ ಅಶೋಕ್ ಕೆ ಆರ್ -ನಂದಕುಮಾರ್ ಕೆ ಎನ್. ಕುಂಬ್ರಿಉಬ್ಬು   ಜಾತಿ ದೌರ್ಜನ್ಯದ ಹೆಚ್ಚಳ ಹೆಚ್ಚಿನಂಶ ಶೂದ್ರರು ಗೇಣಿಗೆ ಪಡೆದಿದ್ದ ಇನಾಮು ಭೂಮಿಗಳನ್ನು ಮಠಗಳು ವಾಪಸ್ಸು ಗಳಿಸಿಕೊಂಡಿದ್ದು , ಹಾಗೂ ಸೈನಿಕರು ಮತ್ತು ಕರಕುಶಲ ಕಾರ್ಮಿಕರು ಹಳ್ಳಿಗಳಿಗೆ ಗುಳೇ ಹೋಗಿದ್ದು ಜಾತಿ ದೌರ್ಜನ್ಯದ ಮತ್ತೊಂದು ಮಜಲನ್ನು ಉದ್ಘಾಟಿಸಿತು. ಊಳಿಗಮಾನ್ಯ ಆಳುವ ವರ್ಗ ಜಾತಿ ವ್ಯವಸ್ಥೆಯ ರಕ್ಷಣೆಯಲ್ಲಿ ಕಾರ್ಮಿಕರಿಂದ ಗರಿಷ್ಠ ಮಟ್ಟದ ಕೆಲಸ ತೆಗೆದುಕೊಂಡಿತು. ಸಮಾಜ , ಸಂಸ್ಕೃತಿ ಮತ್ತು ಧಾರ್ಮಿಕ ವೃತ್ತಗಳಲ್ಲಿದ್ದ ಜಾತಿ ವಿರೋಧಿ ಪ್ರಗತಿಪರ ಚಿಂತನೆಗಳೆಲ್ಲವೂ ಕುಸಿದಿದ್ದನ್ನು ಕೈಗೊಂಬೆ ಆಡಳಿತ ವಿಶೇಷ ನೋವಿನಿಂದ ಗಮನಿಸಿತು. ಮೇಲುಕೋಟೆಯಲ್ಲಿ ಪುರಾಣಗಳ ನೆಪದಲ್ಲಿ ಅಲ್ಲಿನ ಹೊಲೆಯರಿಗೆ ಶ್ರೀವೈಷ್ಣವ ಬ್ರಾಹ್ಮಣರಿಂದ ಸಿಕ್ಕ ವಿಶೇಷ ಹಕ್ಕುಗಳ ಕುರಿತು ಥರ್ಸ್ಟನ್   ತಿಳಿಸುತ್ತಾರೆ. ಹೊಲೆಯರ ಹೋರಾಟದಿಂದ , ಅವರಿ...

ನೋವಿನ ರೋಷ#anguish of pain#poem

  ನೋವಿನ ರೋಷ ನೋವು ಸಂಕಟ ತಳಮಳ ಆಕ್ರಂದನ ರೋಷ ನನ್ನದು ಮಾತ್ರವಲ್ಲ ನನ್ನ ಬಾಂಧವರದೂ ಶತಶತಮಾನಗಳದು ವರ್ಣಾಶ್ರಮ ಧರ್ಮದಷ್ಟು ಹಳೆಯದು ಇದೆ ಇಂದೂ ಹೊಸ ರೂಪ  ಹೊಸ ಭಾವಗಳಲಿ   ನಮಗಿಲ್ಲ  ಅವರು ಪಟ್ಟಷ್ಟು ಕಷ್ಟಕೋಟಲೆಗಳು ಸುರಿಸಿಲ್ಲ  ಅವರು ಸುರಿಸಿದಷ್ಟು ರಕ್ತ ಬಸಿದಿಲ್ಲ  ಅವರು ಬಸಿದಷ್ಟು ಬೆವರು ಬಾಚಿಲ್ಲ  ಅವರು ಬಾಚಿದಷ್ಟು ಮಲಮೂತ್ರ ಪಟ್ಟಿಲ್ಲ  ಆ ಹೆಣ್ಣುಗಳು ಪಟ್ಟಷ್ಟು ಅತ್ಯಾಚಾರ ದೌರ್ಜನ್ಯಗಳ ಮಾಡಿಲ್ಲ  ಅವರು ಮಾಡಿದಷ್ಟು ತ್ಯಾಗ ಬಲಿದಾನ ಹಾಕದೆ ಕಾಲಿಗೆ ಚಪ್ಪಲಿ ತೊಡದೆ ಬಟ್ಟೆ  ಮುಕ್ಕಾಲು ಬೆತ್ತಲೆ ಉಗುಳದೆ ವಾಕರಿಕೆ ಬಂದರೂ   ಬಾಳಿದರು ಕಾದಾಡುತ್ತಾ ಬೆಳೆಸಿದರು ಮಕ್ಕಳು ಮರಿಗಳ ಸಾಗಿದ ದಾರಿ ಕಲ್ಲು ಮುಳ್ಳು, ಪ್ರಪಾತಗಳದು   ದಾರಿಗುಂಟ ಖಡ್ಗ ಕತ್ತಿ ಕೋವಿಗಳ ಆರ್ಭಟ ಸುಟ್ಟಿದ್ದವು ಬೆಂಕಿಯುಗುಳಿ  ಬೆಂದುಹೋಗಿತ್ತು ಕೇರಿಕೇರಿ ವಿಷವಾಗಿತ್ತು ಕುಡಿಯುವ ನೀರು ತುಂಡಾಗಿತ್ತು ಮುಗಿದ ಕೈಗಳೇ ದೆವ್ವಗಳಾಗಿದ್ದವು ದೇವರುಗಳು ಮಸಣಗಳಾಗಿದ್ದವು ದೇವಸ್ಥಾನಗಳು ಮೈಲಿಗೆ ಸೋಕಿದರೆ ಹೇಸಿಗೆ ನೋಡಿದರೆ ನೆರಳೇ ನಂಜಾಗಿತ್ತು ಇವರದೇ ಚರ್ಮದ ಚಾದರ  ಅವರ ಅಧಿಕಾರದ ಸುಪ್ಪತ್ತಿಗೆಗೆ ಇವರು ಉಪವಾಸ ವನವಾಸ  ಅವರು ತಿಂದುಂಡು ಅಟ್ಟಹಾಸ ಸತ್ತ ಜಾನುವಾರುಗಳೇ ಇವರ ಆಹಾರ ಚರ್ಮವೇ ಆದಾಯ...

ಅವಕಾಶವನ್ನೇ ಅಳಿಸುವುದೆಂದರೆ#space#rain#landslide#poem

  ಮಳೆಯಾಘಾತದಿಂದ ತತ್ತರಿಸಿದ ಮಲೆನಾಡು ಸಂದರ್ಭ ಅವಕಾಶವನ್ನೇ ಅಳಿಸುವುದೆಂದರೆ….. ಆಗಸವೆಂದರೆ ಎನು ಅವಕಾಶವೇ ಆಗಸ ಆಗಸವನ್ನು ಅಳಿಸಲಾಗುತ್ತಿದೆ ಅಳಿಸುವುದೆಂದರೆ ಅಳುವಲ್ಲ ಅಳಿಸುವುದೆಂದರೆ ಉಳಿವಿಗೂ ಅಲ್ಲ ಅಳಿಸುವುದೆಂದರೆ ಆಳುವವರಿಗಾಗಿ ವೈಭೋಗಕ್ಕಾಗಿ ಮೋಜಿಗಾಗಿ   ಚಿನ್ನದ ತಟ್ಟೆಗಳಲ್ಲಿ ಉಣ್ಣಲಿಕ್ಕಾಗಿ ವಜ್ರವೈಢೂರ್ಯಗಳ ಅಲಂಕಾರದಲ್ಲಿ ಮುಳುಗಲಿಕ್ಕಾಗಿ ವೈಭೋಗವನ್ನು ತೋರಲಿಕ್ಕಾಗಿ ಅಳಿಸುವುದೆಂದರೆ ಬಹುಸಂಖ್ಯಾತರ ಅಳಿವಿಗಾಗಿ   ಯಾರು ಬಗೆದವರು ಧರೆಯ ಒಡಲ ಯಾರು ಒಡೆದರು ಮೋಡಗಳ ಬಗೆಯ ಯಾರು ಸೀಳಿದವರು ಭೂಗರ್ಭವಾ ಯಾರು ಎತ್ತಿಕೊಂಡೋದವರು ಭೂಗರ್ಭದ ಶಿಶುಗಳು, ಭ್ರೂಣಗಳ ಯಾರಾದರು ಅನಾಥರು ಯಾರು ಕಳೆದುಕೊಂಡವರು ಮನೆ ಮಠ ಬದುಕು ನೆಮ್ಮದಿ ಭವಿಷ್ಯಗಳ ಯಾರು ಕೊಚ್ಚಿಹೋದವರು, ಯಾರು ಹೂತುಹೋದವರು ಯಾರ ಉಸಿರುಗಳು ಕಣ್ಣೀರಿನ ಆಕ್ರಂದನದ ನಿಟ್ಟುಸಿರುಗಳಾದವು   ತಂಪೆರೆದು ಹಸಿರಿಡಿದು ಭರವಸೆಯಾಗಿದ್ದ ಬೆಟ್ಟ ಗುಡ್ಡ ಕಾಡುಗಳು ಯಾರಿಗಿಂದು ಕೆಂಪು ಕೆಂಪಾಗಿ ರಕ್ತವನ್ನು ಬಸಿಯುತಿವೆ ಹೆಪ್ಪುಗಟ್ಟಿದ ರಕ್ತ ಯಾರದ್ದು ಕರಗಿ ನೀರಾಗಿ ಹರಿದಿದ್ದು ಯಾರ ರಕ್ತ ಹೆಣಗಳಾಗಿದ್ದು ಯಾರು ಧನ ಕೂಡಿಟ್ಟುಕೊಂಡಿದ್ದು ಯಾರು ಹೊರದೇಶದ ಬಂಗಲೆಗಳಲ್ಲಿ ಅಡಗಿದ್ದು ಯಾರು       ಪಶ್ಚಿಮದ ಕಾನನವು ಆರ್ಭಟಿದೆ ಅಟ್ಟಿಸಿದೆ ಬೀಳಿಸಿದೆ ತೇಲಿಸಿದೆ ...

ಒಡೆಯರುಗಳು - ಕರ್ನಾಟಕದ ಮೊದಲ ಮತ್ತು ಮುಂಚೂಣಿ ಕೈಗೊಂಬೆಗಳು#ಮೇಕಿಂಗ್ ಹಿಸ್ಟರಿ2#vodayars# stooges# puppet rulers#making history 2

ಒಡೆಯರುಗಳು - ಕರ್ನಾಟಕದ ಮೊದಲ ಮತ್ತು ಮುಂಚೂಣಿ ಕೈಗೊಂಬೆಗಳು ಆಂಗ್ಲ ಮೂಲ: ಮೇಕಿಂಗ್ ಹಿಸ್ಟರಿ ಕರ್ನಾಟಕಾಸ್ ಪೀಪಲ್ ಆಂಡ್ ದೆಯರ್ ಪಾಸ್ಟ್ - ಸಂಪುಟ 2                              -ಸಾಕಿ ಕನ್ನಡ ರೂಪಾಂತರ- ಡಾ ಆಶೋಕ್ ಕೆ ಆರ್. -ನಂದಕುಮಾರ್ ಕೆ ಎನ್ ಕುಂಬ್ರಿ ಉಬ್ಬು 1. ಕೈಗೊಂಬೆಯ ತಯಾರಿಕೆ ಒಂ ದು ಶತಮಾನದ ಆಡಳಿತ ಬ್ರಿಟೀಷರಿಗೆ ತಮ್ಮ ವಸಾಹತು ನೀತಿಗಳನ್ನು ರೂಪಿಸಲು ಸಹಕರಿಸಿತ್ತು. 1799 ರಲ್ಲಿ ಟಿಪ್ಪು ಸುಲ್ತಾನನ ಸೋಲಿನ ನಂತರ ಒಡೆಯರ್ ವಂಶವನ್ನು ಪೀಠದ ಮೇಲೆ ವಿಜೃಂಭಿಸುವಂತೆ ಮಾಡುವಲ್ಲಿ ಬ್ರಿಟೀಷ್ ವಸಾಹತು ನೀತಿ ಮಹತ್ತರ ಪಾತ್ರ ವಹಿಸಿತು. ಒಡೆಯರ್ ಆಡಳಿತದ ಉನ್ನತಿಯ ಹಿಂದಿನ ಕಾರಣಗಳ ಬಗ್ಗೆ ಅಂದಿನ ಗವರ್ನರ್ ಜೆನರಲ್ ವೆಲ್ಲೆಸ್ಲಿ ಹೇಳಿದ ಮಾತುಗಳನ್ನು ಗಮನಿಸುವುದಕ್ಕೆ ಮುಂಚೆ ಮೈಸೂರಿನ ರಾಣಿ ಲಕ್ಷ್ಮಿ ಅಮ್ಮಣ್ಣಿ ವಸಾಹತು ಶಕ್ತಿಯ ಮುಂದೆ ತಲೆಬಾಗಿ ಶರಣಾಗಿ ಒಡೆಯರುಗಳನ್ನು ಬ್ರಿಟೀಷರ ಕೈಗೊಂಬೆಯಾಗಿ ತಯಾರಿಸುವುದರಲ್ಲಿ ವಹಿಸಿದ ಪ್ರಮುಖ ಪಾತ್ರವನ್ನು ಅರಿಯೋಣ. 1766 ರಲ್ಲಿ ಮರಣಹೊಂದಿದ ಎರಡನೇ ಕೃಷ್ಣರಾಜ ಒಡೆಯರನ ಹೆಂಡತಿ ಲಕ್ಷ್ಮಿ ಅಮ್ಮಣ್ಣಿ. ನಂಜರಾಜ ಮತ್ತು ಚಾಮರಾಜ ಅವಳ ಮಕ್ಕಳು. ಈ ಈರ್ವರನ್ನೂ ಹೈದರಾಲಿ ಅರಮನೆಗೆ ಸೀಮಿತವಾಗಿರ...