Skip to main content

Posts

Showing posts from August, 2019

Jammu and kashmir - article 370- ಇಂದು ಜಮ್ಮು ಮತ್ತು ಕಾಶ್ಮೀರ !

ಇಂದು ಜಮ್ಮು ಮತ್ತು ಕಾಶ್ಮೀರ ! ನಾಳೆ..?! ಇದೇ ಆಗಸ್ಟ್ 5ರಂದು ಮೋದಿಯ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಾಪೇಕ್ಷವಾಗಿ ಕೆಲವು ಸ್ವಾಯತ್ತ ಸ್ಥಾನಮಾನವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತು. ಸಮರ್ಪಕ ಚರ್ಚೆಗೂ ಅವಕಾಶ ನೀಡದೇ ತರಾತುರಿಯಲ್ಲಿ ಸಂವಿಧಾನದ 370ನೇ ವಿಧಿ ಹಾಗೂ 35 ಎ ಯನ್ನು ರಾಷ್ಟ್ರಪತಿಗಳ ಆಜ್ಞೆಯ ಮೂಲಕ ರದ್ದುಗೊಳಿಸಿದ್ದಲ್ಲದೇ ಒಂದು ರಾಜ್ಯವಾಗಿ ಅದರ ಸ್ಥಾನಮಾನವೂ ಇಲ್ಲದಂತೆ ಮಾಡಿ ಒಡೆದಿರುವುದು ದೇಶವ್ಯಾಪಿ ಬಹು ಮುಖ್ಯ ಚರ್ಚೆಗಳಿಗೆ ಗ್ರಾಸವಾಗಿದೆ. ಮಾತ್ರವಲ್ಲದೇ ಅಂತರಾಷ್ಟ್ರೀಯವಾಗಿಯೂ ಒಂದು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಒಡೆಯಲಾಗಿದೆ. ಬ್ರಿಟೀಷ್ ನಂತರದ ಭಾರತದ ಚರಿತ್ರೆಯಲ್ಲಿ ಒಂದು ರಾಜ್ಯದ ಅಸ್ತಿತ್ವವನ್ನೇ ಇಲ್ಲದಂತೆ ಮಾಡಿರುವುದು ಇದೇ ಮೊದಲು. ಇದಕ್ಕೆ ಅಂಬೇಡ್ಕರ್ ಹೆಸರನ್ನೂ ಕೂಡ ಗುರಾಣಿಯನ್ನಾಗಿ ಬಳಸುವ ಪ್ರಯತ್ನ ನಡೆದಿದೆ.   ಜಮ್ಮು ಕಾಶ್ಮೀರ ವಿಧಾನಸಭೆ ಇರುವ, ಲಡಾಕ್   ವಿಧಾನ ಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಲೋಕಸಭೆಯ ಎರಡೂ ಸದನಗಳಲ್ಲಿ ಸರ್ಕಾರ ಮಂಡಿಸಿದ್ದ ಜಮ್ಮು ಕಾಶ್ಮೀರ ಪುನರ್ ಸಂಘಟನಾ ಮಸೂದೆ 2019 ಅನ್ನು ಅಂಗೀಕಾರವನ್ನೂ ಪಡೆದುಕೊಂಡಿತು. ಬಿಜೆಪಿ ಪಿಡಿಪಿಯೊಂದಿಗೆ   ಸಮ್ಮಿಶ್ರ ಸರಕಾರವನ್ನು ರಚಿಸಿ ನಂತರ ಉ...

Dream- colour- poem-ಬಣ್ಣದ ಕನಸು-ಉರಿ

ಬಣ್ಣದ ಕನಸು-ಉರಿ ಬಣ್ಣಬಣ್ಣದ ಕನಸುಗಳು ಬೀಳುವಲ್ಲಿ ಬಣ್ಣದೊಂದಿಗೆ ಉರಿ ಬೀಳತೊಡಗಿದೆ ಬಿದ್ದ ಉರಿ ಜ್ವಾಲೆಯಾಗತೊಡಗಿದೆ ಬಣ್ಣಕ್ಕೆ ಜಾತಿಯಿದೆ ಕೋಮಿದೆ ರಾಜಕೀಯವೂ ಇದೆಯಲ್ಲ ಬಣ್ಣ ಚಿತ್ರವಾಗುವುದೇ ಭೂಪಟವಾಗುವುದೇ ಹೂವಾಗುವುದೇ ಕಾಡಾಗುವುದೇ ಸಮುದ್ರವಾಗುವುದೇ ಬೆಟ್ಟಗುಡ್ಡಗಳಾಗುವುದೇ ಹೋರಾಡುವ ಜನಸಾಗರವಾಗುವುದೇ ಬಣ್ಣಕ್ಕೆ ಮಾತುಂಟು ಭಾವವುಂಟು ರೋಷವುಂಟು ಆವೇಶವುಂಟು ಬಣ್ಣ ಚೆಲ್ಲಬಹುದು ಎರಚಬಹುದು ಚಿಮ್ಮಲೂ ಬಹುದು ಬಣ್ಣದ ಮಾತುಗಳಿರುವಲ್ಲಿ ಬಣ್ಣದ ನಿಜ ಬಣ್ಣ ತಿಳಿಯುವುದು ತುಸು ತ್ರಾಸು ಏನೇ ಆದರೂ ಅರ್ಥ ಮಾಡಿಕೊಳ್ಳಬೇಕು ಬಣ್ಣವ ಇಲ್ಲದಿರೆ ನಮಗೆ ಆಯ್ಕೆಯೇ ಇಲ್ಲ ಬಣ್ಣದ   -------ನಂದಕುಮಾರ್ ಕೆ.ಎನ್ .   10/08/2018

Friendship- ಸ್ನೇಹ

  ಸ್ನೇಹ ಸ್ನೇಹ ಸಿಗುವುದಿಲ್ಲ ಕಟ್ಟಿ ಬೆಳೆಸಬೇಕು ಬೆಳೆಸ ಬೇಕೆಂದರೆ ಸುಲಭವಲ್ಲ ಇಬ್ಬರೂ ಬಯಸಬೇಕು   ತರಚುಗಳಂತೂ ಇರುತ್ತವೆ ಕೆಲವೊಮ್ಮೆ ಗಾಯವೂ ಕಟ್ಟುವಾಗ ಕುಟ್ಟಬಾರದು ಕುಟ್ಟಿದರೂ ಬೀಳಬಾರದು ಬಿದ್ದರೂ ಏಳದೇ ಇರಬಾರದು ಎದ್ದಮೇಲೆ ನಿಲ್ಲಬಾರದು ನಡೆಯಬೇಕು ಜೊತೆಗೆ ನಡಿಗೆ ನಿರಂತರವಾದಷ್ಟೂ ಸ್ನೇಹ ನಿರಂತರ ಸ್ನೇಹದೊಂದಿಗೆ ಬದುಕು   ಬದುಕೇ ಸ್ನೇಹವಾಗುತ್ತದೆ --- ನಂದಕುಮಾರ್ ಕೆ .ಎನ್   05/08/2018

Independence day- poem- kavithe- ಸ್ವಾತಂತ್ರ್ಯದ ಸ್ವಗತಗಳು

ಸ್ವಾತಂತ್ರ್ಯದ ಸ್ವಗತಗಳು ಬದಲಾಗಲಿಲ್ಲ ಬದುಕು ಸಿಗಲೇ ಇಲ್ಲ ಭೂಮಿ ಖಾಯಂ ಅಂತೂ ಆಗಲಿಲ್ಲ ಜೋಪಡಿಯ ಜಾಗ ಚುನಾವಣೆಯ ಗಾರುಡಿ ಸ್ವಾತಂತ್ರ್ಯದ ವೈಭವ ಒಂದೇ ಈಸ್ಟ್ ಇಂಡಿಯಾ ಕಂಪನಿ ಅಂದು ಈಸ್ಟೂ ವೆಸ್ಟ್ ನ ನೂರಾರು ಬಹುರಾಷ್ಟ್ರೀಯ ಕಂಪನಿಗಳು ಇಂದು ಹಿಡಿತ ಅವರದೇ ಉಪ್ಪಿನಿಂದ ವಿಮಾನದವರೆಗೂ ಪಕ್ಕದ ಬೀದಿಯ ರಾಮಣ್ಣನ ದಿನಸಿ   ಅಂಗಡಿ ಈಗ ಬಂದ್ ತೆರೆಯುತ್ತಿಲ್ಲ ಕಾಸಿಮಣ್ಣನ ದುಕಾನ್ ಊರಿನ ಜಮೀನು ‘ ಅಭಿವೃದ್ಧಿ ’ ಗೆ ಹವಿಸ್ಸು ಊರ ಪಕ್ಕದ ಸುಂದರ ಗುಡ್ಡ ಈಗ ಬೋಳು ಬೋಳು ಹಳ್ಳಕೊಳ್ಳಗಳೆಲ್ಲಾ ಕೆಂಪು ಕೆಂಪು ಹೆಚ್ಚಿನ ಜನ ಈಗ ಬೀದಿಯಲ್ಲೇ ಇಲ್ಲ ಉದ್ಯೋಗ ನಡೆಯುತ್ತಿಲ್ಲ ಕೃಷಿ ಬೇಸಾಯ ಬೆಳೆದರೂ ಹೇಗೋ ಕಾಣುತ್ತಲೇ ಇಲ್ಲ ಻ ಅಸಲು ಬರಗಾಲ ಆ ಕಡೆ ನೆರೆಗಾಲ ಈ ಕಡೆ ಅಡಿಕೆಗೂ ಹೋಯ್ತು ಮಾನ ಆನೆಗೂ ಹೋಯ್ತು ಮಾನ ದೇಶದ ರಕ್ಷಣೆಗೆ ವಿದೇಶಿ ಬಂಡವಾಳವಂತೆ ಭಕ್ಷಣೆಗಂತೂ ಸುಲಭ ಪಾಡೇನು ಜನರದು ಕೇಳೋರ್ಯಾರು ಬಡತನ ನಿರ್ಮೂಲನೆಯೆಂದು   ಬಡವರನ್ನೇ ನಿರ್ಮೂಲನೆ ಮಾಡಿತು ಯೋಜನಾ ಆಯೋಗ ಹಳ್ಳಿಯವರಿಗೆ ಇಪ್ಪತ್ತೆಂಟೇ ನಗರದವರಿಗೆ ಮೂವತ್ತೆಂಟೇ ರೂಪಾಯಿ ಸಾಕಂತೆ ಅದಕ್ಕಿಂತಲೂ ಹೆಚ್ಚಿದ್ದರೆ ಅವರು ಶ್ರೀಮಂತರಂತೆ ಆದರೆ ಆಯೋಗದ ಻ ಅಧ್ಯಕ್ಷರ ಪಾಯಿಖಾನೆಗೇ ಅರವತ್ತು ಲಕ್ಷ ಬಿಲ್ಲಂತೆ ಅಳುವ ಬಾಯಿಗಳನ್ನ...